Sunday, 7 July 2019

ಶೋಷಿತ ಮಹಿಳೆಯರಿಗೆ ನೆರವಾಗಲು ಗ್ರಾಮ ಮಟ್ಟದಲ್ಲೆ ಸಿಗಲಿ ಪರಿಹಾರ

 ಶೋಷಿತ ಮಹಿಳೆಯರಿಗೆ ನೆರವಾಗಲು ಗ್ರಾಮ ಮಟ್ಟದಲ್ಲೆ ಸಿಗಲಿ ಪರಿಹಾರ


ಶೋಷಿತ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಮಹಿಳೆಯರ  ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿನಿತ್ಯ ಕಂಡುಬರುತ್ತವೆ. ಸರ್ಕಾರಗಳು ಇವುಗಳ ನಿಯಂತ್ರಣಕ್ಕೆ ಹಲವಾರು ಕಾಯ್ದೆಗಳು ತಂದಿದ್ದರೂ ಅವು ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ. ನಿರ್ಭಯಾ ನಿಧಿ , ನಿರ್ಭಯಾ ಕೇಂದ್ರ, ಸಾಂತ್ವನ ಮಹಿಳಾ ಸಹಾಯವಾಣಿ, ಕೌಟುಂಬಿಕ ಆಪ್ತ ಸಮಾಲೋಚನೆ ಕೇಂದ್ರ ಹೀಗೆ ಜಾರಿಗೆ ತಂದಿದ್ದರೂ ಅವುಗಳ ಬಗ್ಗೆ ಜನರಿಗೆ ಮೊದಲು ಅರಿವೇ ಇಲ್ಲ. ಮಹಿಳಾ ಕಾನೂನುಗಳು ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ. ಮರ್ಯಾದೆಗೆ ಅಂಜಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಆರೋಪಿ ಮೇಲೆ ಕೇಸು ಹಾಕಲು ಹಿಂಜರಿಯುತ್ತಾರೆ . ಕೋರ್ಟ್, ಕಛೇರಿ ಅಲೆದಾಡವುದು ಬೇಡ, ಬಡತನ ಹೇಗಾದರೂ ಸಹಿಸಿಕೊಂಡರಾಯ್ತು ಎಂದು ಬಿಟ್ಟು ಬಿಡುತ್ತಾರೆ.
               ಹೀಗೆ ಅಂಜುತ್ತಾ ಭಯದಲ್ಲಿಯೇ ಕಾಲ ಕಳೆಯುತ್ತಾರೆ. ಆದರೆ ನೋಂದ ಮಹಿಳೆಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ. ಹಲವಾರು ಮಹಿಳಾ ಪರ ಸರ್ಕಾರದ ಯೋಜನೆಗಳು ಇದ್ದರೂ ಅವುಗಳನ್ನು ಪಡೆದುಕೊಳ್ಳುವ ಅರಿವು, ಶಕ್ತಿ ಮಹಿಳೆಯರಲ್ಲಿ ಇಲ್ಲ. ಸಾಂತ್ವನ, ಧೈರ್ಯ ಹೇಳುವ ವ್ಯಕಿಗಳು ಕೂಡಾ ಸಿಗುವುದಿಲ್ಲ ಹೀಗಾಗಿ ಮಹಿಳೆಯರು ಆತ್ಮಹತ್ಯೆಯಂತಹ ಪ್ರಯತ್ನಗಳಿಗೆ ಒಳಗಾಗುತ್ತಾರೆ. ಖಿನ್ನತೆಗೆ ಒಳಗಾಗಿ ಮಾನಸಿಕವಾಗಿ ಜರ್ಜರಿತರಾಗುತ್ತಾರೆ.

ಇಷ್ಟೆಲ್ಲಾ ವಾಸ್ತವ ಅಂಶಗಳನ್ನು ನೋಡಿದರೆ ಏನಾದರೂ ಪರಿಹಾರ ಕಂಡುಕೊಳ್ಳುವ ಯೋಚನೆ ಬೇಕಾಗುತ್ತದೆ. ಈಗಾಗಲೆ ಜಾರಿಯಲ್ಲಿರುವ ಮಹಿಳಾ ಸ್ನೇಹಿ, ಕಾನೂನು, ಸಂವಿಧಾನ,  ಯೋಜನೆಗಳು ಮಹಿಳಾ ಕಲ್ಯಾಣಕ್ಕೆ ಪೂರಕವಾಗಿವೆ. ಆದರೆ ಪ್ರಭಾವಿ ಕುಟುಂಬದ ಮಹಿಳೆಯರು ಹೇಗೋ ಪ್ರಭಾವ ಬಳಸಿ ಎಲ್ಲ ಸವಲತ್ತುಗಳನ್ನು  ತಮ್ಮದಾಗಿಸಿಕೂಳ್ಳುತ್ತಿದ್ದಾರೆ. ಆದರೆ ದಮನಿತ, ಶೋಷಿತ ಬಡ ಮಹಿಳೆಯರಿಗೆ ಈ ಸವಲತ್ತುಗಳ ಅರಿವಿಲ್ಲ, ಇವುಗಳ ಅನುಷ್ಠಾನಕ್ಕೆ ಹಲವು ವಿನೂತನ ಕ್ರಮ ಕೈಗೊಳ್ಳಬೇಕಿದೆ.
            ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಹಿಳಾ ಕಲ್ಯಾಣ ಅಧಿಕಾರಿಗಳನ್ನು ನೇಮಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಪ್ರತಿ ಹಳ್ಳಿಗಳಲ್ಲಿ ಪ್ರತಿ ವಾರಕ್ಕೊಮ್ಮೆ ಕೆಲಸದ ಅವಧಿ ಮುಗಿದ ನಂತರ ಮಧ್ಯಾಹ್ನ 03.00  ರಿಂದ ಸಾಯಂಕಾಲ 06.00 ರವರೆಗೆ ಮಹಿಳೆಯರ ವಾಸಸ್ಥಳಗಳಿಗೆ ಹೋಗಿ ಮಹಿಳಾ ಕಲ್ಯಾಣ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಯತ್ನ ನಡೆಯಬೇಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಂತಹ ಹೊಸ ಚಟುವಟಿಕೆಗಳಿಗೆ ಮುನ್ನುಡಿ ಬರೆಯಬೇಕಿದೆ. ಉಳಿದ ಸಮಯದಲ್ಲಿ ಮಹಿಳಾ ಕಲ್ಯಾಣ ಅಧಿಕಾರಿಗಳು ಸಂಶೋಧನೆ, ಅಧ್ಯಯನ ನಡೆಸಿ ಮಹಿಳಾ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳುವುದು. ಶಾಲಾ ಮಕ್ಕಳಿಗೆ ಮಹಿಳಾ ಕಲ್ಯಾಣಕ್ಕೆ ಸಂಬಂಧಿಸಿದಂತೆ, ನೈತಿಕ ಶಿಕ್ಷಣ, ಕಾಯ್ದೆ ಕಾನೂನುಗಳ ಕುರಿತು ಬೋಧನೆ ಮಾಡುವುದು.

ಮಹಿಳಾ ಕಲ್ಯಾಣ ಅಧಿಕಾರಿಗಳ ಜವಾಬ್ದಾರಿಗಳ ಮತ್ತು ಪಾತ್ರ

-ಮಹಿಳಾ ಕಲ್ಯಾಣ ಅಧಿಕಾರಿಗಳು ಇವರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಬೇಕು.
-ಮಹಿಳೆಯರಿಗೆ ಸಂವಿಧಾನ, ಮಹಿಳಾ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು.
-ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹಿಳಾ ಕಲ್ಯಾಣ ಸೇರಿ ಉಪಯುಕ್ತ ಯೋಜನೆಗಳ ಕುರಿತು ಮಾಹಿತಿ ನೀಡುವುದು.
-ನೋಂದ, ಶೋಷಿತ ಮಹಿಳೆಯರಿಗೆ  ಸೂಕ್ತ ಕಾನೂನು ಸಲಹೆ, ನೆರವು ನೀಡುವುದು
-ಮಹಿಳಾ ಕಲ್ಯಾಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಮಹಿಳಾ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರ ಪಡೆದುಕೊಳಬೇಕು
-ಸ್ವಯಂ ಉದ್ಯೋಗಕ್ಕಾಗಿ ಕೌಶಲ್ಯ ತರಬೇತಿ ಹಾಗೂ ಸ್ವಯಂ ಉದ್ಯೋಗ ಗ್ರಾಮದಲ್ಲಿಯೇ ಹಾಗೂ ಮನೆಯಲ್ಲೇ ಕೈಗೊಳ್ಳಲು ಅನುವು ಮಾಡಿ ಕೊಡುವುದು.
-ಮಹಿಳೆಯರು ಮತ್ತು ಸರ್ಕಾರದ ಮಧ್ಯೆ ಮಧ್ಯಸ್ಥಿಕೆ ವಹಿಸಿ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಶ್ರಮಿಸುತ್ತಿರುವ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಉಪಯೋಗ ಪಡೆದುಕೊಳ್ಳುವುದು.
-ಶಾಲಾ ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ, ಅತ್ಯಾಚಾರ, ಶೋಷಣೆ, ಬಾಲಕಾರ್ಮಿಕ ಸೇರಿ ಸಮಸ್ಯೆಗಳನ್ನು ತಡೆಯಲು ಸೂಕ್ತ ಜಾಗೃತಿ ಮೂಡಿಸುವುದು.
-ನೋಂದ ಮಹಿಳೆಯರಿಗೆ ಮನೆ ಬೇಟಿ ಮಾಡಿ ಸಾಂತ್ವನ, ಆಪ್ತ ಸಮಾಲೋಚನೆ ನೀಡುವುದು.
-ಮಹಿಳೆಯರಿಗೆ ಉನ್ನತ ಶಿಕ್ಷಣ, ಆರೋಗ್ಯ ಪಡೆಯಲು ನೆರವು ನೀಡುವುದು
-ಹೀಗೆ ಮಹಿಳೆಯರಿಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ಈ ಮಹಿಳಾ ಕಲ್ಯಾಣ ಅಧಿಕಾರಿಗಳು ನಿರ್ವಹಿಸಬೇಕು.

ಮಹಿಳಾ ಕಲ್ಯಾಣ ಅಧಿಕಾರಿಗಳಿಗೆ ಶಿಕ್ಷಣ ಮತ್ತು ಅರ್ಹತೆ - ಮನಶಾಸ್ತ್ರದಲ್ಲಿ  ಅಥವಾ ಸಮಾಜ ಕಾರ್ಯ ಅಥವಾ ಸಮಾಜಶಾಸ್ತ್ರ ಅಥವಾ ಮಹಿಳಾ ಅಧ್ಯಯನದಲ್ಲಿ ಪದವಿ ಪೂರೈಸಿರುವ ಅಭ್ಯರ್ಥಿಗಳಿಗೆ ಜವಾಬ್ದಾರಿ ನೀಡಬೇಕು. ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು.
ಇಂತಹ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಬೇಕಿದೆ. ಹೊಸತನಕ್ಕೆ ನಾಂದಿ ಹಾಡಬೇಕಿದೆ. ಮಹಿಳಾ ಸಮಸ್ಯೆಗಳಿಗೆ ಮುಕ್ತಿ ನೀಡಬೇಕಿದೆ ಹಾಗೂ ಕೆಲವು ವಿಷಯಗಳ ಪದವೀಧರರಿಗೆ ಉದ್ಯೋಗಾವಕಾಶ ಲಭಿಸುವುದರೊಂದಿಗೆ ಮಹಿಳಾ ಸಮಸ್ಯೆ ನಿವಾರಿಸಿ, ಮಹಿಳೆಯರಲ್ಲಿ ನಾಯಕತ್ವ ಬೆಳಸಲು ಈ ನಿರ್ಧಾರ ಕೈಗೊಳ್ಳಬೇಕಿದೆ.

ಭೈರಪ್ಪ ಹಾಲಪ್ಪಗೋಳ, ಸಮಾಜಕಾರ್ಯಕರ್ತರು, ಚಿಕ್ಕೋಡಿ 

Friday, 21 June 2019

ಕರಗಾಂವ ಹಾಗೂ ಮಹಾಲಕ್ಷ್ಮಿ ಏತ ನೀರಾವರಿ ಅನುಷ್ಠಾನ ಯಾವಾಗ?

ಈ ಭಾರಿಯಾದರು ಈಡೇರುತ್ತಾ ಚಿಕ್ಕೋಡಿ ದಕ್ಷಿಣ ಹಳ್ಳಿಗಳ ನೀರಾವರಿ ಕನಸ್ಸು?

ರಾಜಕಾರಣಿಗಳ ಮೊಂಡಾಟಕ್ಕೆ ಈಡೇರದ ಅಭಿವೃದ್ಧಿ ||ಬರಗಾಲ, ಬಡತನದಲ್ಲಿಯೇ  ಆಯುಷ್ಯ ಕಳೆಯುತ್ತಿರುವ ಜನ

ಚಿಕ್ಕೋಡಿ - ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ದಕ್ಷಿಣ ಹಳ್ಳಿಗಳ ಬಗ್ಗೆ ಯಾರಿಗಾದರೂ ಕೇಳಿದರೆ ಥಟ್ಟನೆ ಅವರ ಬಾಯಿಂದ ಕೇಳಿ ಬರುವುದು ಮಡ್ಡಿ ಪ್ರದೇಶ, ಮಡ್ಡಿ ಜನ, ಒನ ಮಡ್ಡಿ ಎಂಬುದು ಸಾಮಾನ್ಯ ಪದ. ಆದರೆ ಈ ಮಡ್ಡಿ ಪ್ರದೇಶ, ಮಡ್ಡಿ ಜನ, ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ತೆಗೆದುಹಾಕಲು ಇಲ್ಲಿಯವರೆಗೆ ಸ್ವಾತಂತ್ರ್ಯ ದೊರೆತು 7 ದಶಕಗಳೇ ಕಳೆದರೂ ಅಂತಹ ಯಾವೊಬ್ಬ ನಾಯಕ, ರಾಜಕೀಯ ಪಕ್ಷ ಮುಂದೆ ಬಂದಿಲ್ಲ. ಚಿಕ್ಕೋಡಿ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಕರೋಶಿ ಮತ್ತು ನಾಗರಮುನ್ನೊಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಬರುತ್ತದೆ.ಇವೆಲ್ಲ ನಾಗರಮುನ್ನೊಳಿ ಹೋಬಳಿ ವ್ಯಾಪ್ತಿಗೆ ಬರುತ್ತವೆ. ಪ್ರಮುಖವಾಗಿ ಈ ಪ್ರದೇಶದಲ್ಲಿ ಕರಗಾಂವ ಏತನೀರಾವರಿ ಹಾಗೂ ಮಹಾಲಕ್ಷ್ಮಿ ಏತನೀರಾವರಿ ಯೋಜನೆಗಳು ಪ್ರಮುಖ ಯೋಜನೆಗಳು. ಇದರ ವ್ಯಾಪ್ತಿಗೆ ಕರಗಾಂವ ಡೋಣವಾಡ, ಹಂಚಿನಾಳ ಕೆಕೆ, ನಾಗರಮುನ್ನೋಳ್ಳಿ, ಉಮರಾಣಿ, ಇಟ್ನಾಳ, ಕಮತೇನಟ್ಟಿ, ಬೆಣ್ಣಿಹಳ್ಳಿ, ಬಂಬಲವಾಡ, ಕುಂಗಟೋಳಿ , ಕರೋಶಿ, ಜೈನಾಪುರ, ಮುಗಳಿ, ಮಜಲಟ್ಟಿ ಕಜಗೌಡನಟ್ಟಿ, ವಡ್ರಾಳ, ತೋರನಹಳ್ಳಿ ಮಾಂಗನೂರ, ಬಿದರೊಳ್ಳಿ  ಸೇರಿ ಹಲವಾರು ಹಳ್ಳಿಗಳು ಬರುತ್ತವೆ. ಇಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ, ದನಕರುಗಳಿಗೆ ಮೇವು ಸಿಗುತ್ತಿಲ್ಲ,ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಇದೇ ಸ್ಥಿತಿ.

 ಸನಿಹದಲ್ಲೆ 3-4 ನದಿಗಳಿದ್ದರೂ ಹನಿ ನೀರಿಗೂ ಹಾಹಾಕಾರ 

ಕೇವಲ 12 ಕೀ. ಮಿ ದೂರದಲ್ಲಿ ಹಿರಣ್ಯಕೇಶಿ ನದಿ, 15 ಕೀ. ಮೀ ಅಂತರದಲ್ಲಿ ಘಟಪ್ರಭಾ ನದಿ, 20 ಕಿ. ಮೀ ಅಂತರದಲ್ಲಿ ಕೃಷ್ಣಾನದಿ ಮತ್ತು ಅದರ ಉಪನದಿಗಳು ಹರಿಯುತ್ತವೆ. ಕೊಟಬಾಗಿ ಏತನೀರಾವರಿ ಯೋಜನೆ ಈ ಹಳ್ಳಿಗಳ ಪಕ್ಕದಲ್ಲಿಯೇ ಇದೆ. ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆ 150 ಕೀ ಮಿ ದೂರದ ಜಮಖಂಡಿ, ಮುಧೋಳ ಬೀಳಗಿ, ರಾಯಭಾಗ, ಗೋಕಾಕ ತಾಲ್ಲೂಕಿನ ಪ್ರದೇಶಗಳು ನೀರಾವರಿಗೆ ಒಳಪಟ್ಟಿದೆ ಆದರೆ ಸಮೀಪದಲ್ಲಿಯೇ ಇರುವ ಈ ಹಳ್ಳಿಗಳಿಗೆ ನೀರು ಭಾಗ್ಯ ಬಂದಿಲ್ಲ.

ರಾಜಕೀಯ ಮೊಂಡಾಟವೇ ಮೇಲು?

ಈ ಭಾಗದ ಹಳ್ಳಿಗಳು ಚಿಕ್ಕೋಡಿ ಪಟ್ಟಣಕ್ಕೆ ಕೇವಲ 1,2 ಕೀ ಮಿ ಅಂತರದಲ್ಲಿ ಇದ್ದರೂ ಹತ್ತು ವರ್ಷಗಳ ಹಿಂದೆ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದವು, ಇಂದೂ ದೂರದ ರಾಯಭಾಗ ವಿಧಾನ ಸಭಾ ಕ್ಷೇತ್ರದಲ್ಲಿ ಈ ಭಾಗದ ಹಳ್ಳಿಗಳು ವಿಲೀನವಾಗಿವೆ. ಅಂದಿನಿಂದ ಇಂದಿನವರೆಗೆ ಈ ಭಾಗದ ಹಳ್ಳಿಗಳನ್ನು ಎಲ್ಲಾ ರಾಜಕೀಯ ನಾಯಕರು ನಿರ್ಲಕ್ಷ್ಯದಿಂದ ನೋಡುತ್ತಿದ್ದಾರೆ. ಈ ಭಾಗದ ಪ್ರಭಾವಿ ವ್ಯಕ್ತಿಗಳನ್ನು ಮನ್ನಿಸಲು ಕ್ಷೇತ್ರವನ್ನು ಪರಿಶಿಷ್ಟ ಜಾತಿ ಮೀಸಲು ನೀಡುತ್ತಿದ್ದಾರೆ.

ಇಲ್ಲಿ ಬರೀ ಭರವಸೆಗಳ ಮಹಾಪೂರ, ಸುಳ್ಳು ಆಶ್ವಾಸನೆಗಳೆ ಎಲ್ಲಾ -

ಈ ಭಾಗದಲ್ಲಿ ನಾಯಕರಲ್ಲಿ ಒಗ್ಗಟ್ಟು ಇಲ್ಲದಿರುವುದು ಈ ಅಭಿವೃದ್ಧಿಗೆ ಕಾರಣ ಎಂಬುದು ಗೊತ್ತಾಗುತ್ತದೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು ಚುನಾವಣೆಲಿ ಆರಿಸಿ ಬರುತ್ತಾರೆ ಅವರಿಗೆ ನೀರಾವರಿ ಯೋಜನೆ, ಅಭಿವೃದ್ಧಿ ಯೋಜನೆ ಬಗ್ಗೆ ಒಂದಿಷ್ಟು ಕೂಡಾ ಮಾಹಿತಿ ಇಲ್ಲ ಇವರೆಲ್ಲರೂ ಕೇವಲ ಹೆಸರಿಗಷ್ಟೆ ಜನಪ್ರತಿನಿಧಿಗಳು ಆಗಿದ್ದಾರೆ. ಜನರ ಸಮಸ್ಯೆಗಳಿಗೆ ಒಂದು ಬಾರಿಯೂ ಸ್ಪಂದಿಸಿಲ್ಲ.
         ಇನ್ನೂ ವಿಧಾನಸಭಾ ಸದಸ್ಯರು ಮೂರು ಭಾರಿ ಚುನಾವಣೆಯಲ್ಲಿ ಆಯ್ಕೆ ಆದರೂ ಕೂಡಾ ಒಂದು ಭಾರಿಯೂ ಅದರ ಬಗ್ಗೆ ಮಾತೆತ್ತಿಲ್ಲ. ಸಂಸದರು ದೇವರ ಮೇಲೆ ಆಣೆ ಮಾಡಿ ಮತ ಪಡೆದು ಜನರಿಗೆ ಮೋಸ ಮಾಡಿ ಹೋಗುತ್ತಾರೆ ಆದರೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒಂದು ಭಾರಿಯೂ ಶ್ರಮಿಸಿಲ್ಲ. ಹಾಗೇಯೇ ಪ್ರಸ್ತುತ ಸಂಸದರು ಕೂಡಾ ನೀರಾವರಿ ವಿಷಯದ ಮೇಲೆ ಚುನಾವಣೆಯಲ್ಲಿ ಗೆದ್ದುಬಂದಿದ್ದು ಎಂದಿನಂತೆ ಇವರು ಕೂಡ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಾರೆ ಎಂಬುದು ಜನರ ನಂಬಿಕೆಯಾಗಿದೆ. ಇದನ್ನೇಲ್ಲ ಮೀರಿ ಸಂಸದರು ಬರದ ನಾಡಿನ ಭಗೀರಥರಾಗುವವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ಜನರ ವಲಸೆ ನಿರಂತರ -

ಚಿಕ್ಕೋಡಿ ದಕ್ಷಿಣ ಹಳ್ಳಿಗಳ ಜನರು ಕುಡಿಯಲು ನೀರು, ಆಹಾರ, ದನಕರುಗಳಿಗೆ ಮೇವಿಲ್ಲದೆ  ಇದ್ದ ದನಕರುಗಳನ್ನು ಕಟುಕರಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ, ಇದ್ದ ಅಲ್ಪ ಸ್ವಲ್ಪ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡಲು ಬಡತನ, ನೀರು ತುಂಬಲು ಕೂಡಾ ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಲಹರಣ ಮಾಡುವ ಪರಿಸ್ಥಿತಿ ಇದ್ದರೂ ಒಂದು ಕೊಡ ನೀರು ಸಿಗುತ್ತಿಲ್ಲ.ಹೀಗಾಗಿ ಜನ ಬೆಂಗಳೂರು, ಗೋವಾ, ಮಹಾರಾಷ್ಟ್ರ ದತ್ತ ವಲಸೆ ಹೋಗುತ್ತಿದ್ದಾರೆ. ಕೆಲವರು ನೀರಾವರಿ ಪ್ರದೇಶಕ್ಕೆ ಗುಳೆ ಹೋಗುತ್ತಿದ್ದಾರೆ.

ಮಕ್ಕಳಿಗೆ ಮದುವೆ ಭಾಗ್ಯ ಸಿಗುತ್ತಿಲ್ಲ -

ಈ ಮಡ್ಡಿ ಭಾಗದ ಗಂಡು ಮಕ್ಕಳಿಗೆ, ಬರಗಾಲ, ಬಡತನ, ಕಾರಣದಿಂದ ಮಡ್ಡಿ ಭಾಗ ಎನ್ನುವ ಕಾರಣಕ್ಕೆ ವೈವಾಹಿಕ ಸಂಬಂಧ ಕೂಡಿ ಬರುತ್ತಿಲ್ಲ. ಎಲ್ಲ ತಂದೆ ತಾಯಿಯರ ಕೊರಗು ಒಂದೆ ಅದೇ ಮಕ್ಕಳಿಗೆ ಮದುವೆ ಆಗ್ತಿಲ್ಲ ಎನ್ನುವುದು.

ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ, ನಿರುದ್ಯೋಗವೇ ಎಲ್ಲಾ?

ಈ ಭಾಗದಲ್ಲಿ ಎಲ್ಲಾ ಮಕ್ಕಳಿಗೆ ಪ್ರೌಢಶಾಲೆಯೇ ಕೊನೆಯ ಶಿಕ್ಷಣ, ಕೆಲವು ಗ್ರಾಮಗಳಲ್ಲಿ  ಪ್ರೌಡಶಿಕ್ಷಣ ಕೊಡಾ ಮರಿಚೀಕೆ ಎನ್ನುವಂತಿದೆ ಇನ್ನೂ ಪದವಿ, ಸ್ನಾತಕೋತ್ತರ ಶಿಕ್ಷಣ ವಂತೂ ಕನಸಿನ ಮಾತು ಯಾವುದೇ ಸರ್ಕಾರಿ, ಖಾಸಗಿ ಪದವಿ ಕಾಲೇಜುಗಳು ಈ ಭಾಗದಲ್ಲಿ ಇಲ್ಲ.

ಹಲವು ಭಾರಿ ಮನವಿ, ಪ್ರತಿಭಟನೆ ನಡೆದರೂ ಕೇಳದ ಜನಪ್ರತಿನಿಧಿಗಳು, ಅಧಿಕಾರಿಗಳು -

ಈ ಭಾಗದ ಡಿ ಟಿ ಪಾಟೀಲ, ಬಿ ಆರ್ ಸಂಗಪ್ಪ ಗೋಳ, ರೈತ ಸಂಘದ ಮುಖಂಡರು, ರಾಜಕೀಯ ನಾಯಕರು ಈ ಭಾಗದ ಹಲವಾರು ನಾಯಕರು ದಶಕಗಳಿಂದ ಹೋರಾಟ   ತೀವ್ರ ಸ್ವರೂಪ ನಡೆದರೂ ಯಾವುದೇ ರಾಜಕೀಯ ಪಕ್ಷಗಳು, ನಾಯಕರು, ಅಧಿಕಾರಿಗಳು ಈ ನೀರಾವರಿ ಬೇಡಿಕೆಗೆ ಸ್ಪಂದಿಸಿಲ್ಲ.
                ಈ ಭಾಗದಲ್ಲಿ ಸಂಘಟಿತ ಹೋರಾಟ ಇರದಿರುವ ಕಾರಣ ಅಷ್ಟೊಂದು ಯಶಸ್ಸು ದೊರೆತಿಲ್ಲ . ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳು ನೀರಾವರಿ ಮಾಡಿಸಿಯೇ ತೀರುತ್ತೇವೆ  ಎಂದು ಹೇಳುತ್ತಾರೆ. ಆದ್ರೇ ಅಂತಹ ಇಲ್ಲಿಯವರೆಗೆ ಎಷ್ಟು ಚುನಾವಣೆಗಳಾದವೋ  ಆದರೆ ನೀರು ಮಾತ್ರ ಬರುತ್ತಿಲ್ಲ. ಚುನಾವಣೆ ಭಹಿಷ್ಕಾರದ ಮಾತು ಕೇಳಿ ಬಂದರೂ ಮುಖಂಡರು ಚುನಾವಣೆ ಭಹಿಷ್ಕಾರಕ್ಕೆ ಮುಂದಾಗುತ್ತಿಲ್ಲ.

ಬೇಡಿಕೆ ಹಲವು ಈಡೇರಿಕೆ ಮಾತ್ರ ಶೂನ್ಯ

ಪ್ರತ್ಯೇಕ ವಿಧಾನ ಸಭಾ ಕ್ಷೇತ್ರ ರಚಿಸಿ ಚಿಕ್ಕೋಡಿ ದಕ್ಷಿಣ ಹಳ್ಳಿಗಳು ಮತ್ತು ಚಿಕ್ಕೋಡಿ ಪಟ್ಟಣ ಸೇರಿ ಒಂದು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚಿಸಬೇಕು. ಇಗೀರುವ ಚಿಕ್ಕೋಡಿ ಸದಲಗಾ ವಿಧಾನಸಭಾ ಕ್ಷೇತ್ರವನ್ನು ಚಿಕ್ಕೋಡಿಯಿಂದ ಪ್ರತ್ಯೇಕಿಸಬೇಕು, ಕೇವಲ ರಾಯಭಾಗ ತಾಲ್ಲೂಕಿನ ಹಳ್ಳಿಗಳನ್ನು ಸೇರಿಸಿ ರಾಯಬಾಗ ವಿಧಾನಸಭಾ ಕ್ಷೇತ್ರ ರಚಿಸಬೇಕು ಎಂಬುದು ಈ ಭಾಗದ ಜನರ ಬೇಡಿಕೆ ಆಗಿದೆ.
                          ಹಾಗೆಯೇ ಈ ಭಾಗದ ಜನ ಉದ್ಯೋಗಕ್ಕಾಗಿ ಬೃಹತ್ ಸಾರ್ವಜನಿಕ ಉದ್ದಿಮೆಯ ನಿರೀಕ್ಷೆಯಲ್ಲಿದ್ದಾರೆ., ಕರೋಶಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹಳ್ಳಿಗಳನ್ನು ಸೇರಿಸಿ ಕರೋಶಿ ಹೋಬಳಿ ರಚಿಸಿ ಎಂಬ ಬೇಡಿಕೆ ಕೂಡಾ ಇದೇ. ಕರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಈ ಭಾಗದ ಜನರ ಬೇಡಿಕೆ ಆಗಿದೆ.

ಇನ್ನಾದರೂ ಈಡೇರುತ್ತಾ ನೀರಾವರಿ ಕನಸು? ಯಾರಾಗ್ತಾರೆ ಬರದ ನಾಡಿನ ಭಗೀರಥ? ಇನ್ನಾದರೂ ಸ್ಪಂದಿಸುತ್ತಾರಾ ಸರ್ಕಾರ?

ಚಿಕ್ಕೋಡಿ ದಕ್ಷಿಣ ಹಳ್ಳಿಗಳ ಜನರನ್ನು ಕೇವಲ ಮತಗಳಿಗೆ ಮಾತ್ರ ಉಪಯೋಗಿಸಿ ಅವರಿಗೆ ಎಲ್ಲ ರಾಜಕೀಯ ವ್ಯಕ್ತಿಗಳು ಮೋಸಮಾಡುತ್ತಾ ಬಂದಿದ್ದು ಇನ್ನಾದರೂ ರಾಜ್ಯ, ಕೇಂದ್ರ ಸರ್ಕಾರಗಳು, ರಾಜಕೀಯ ನಾಯಕರು ಸ್ಪಂದಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ, ರಾಜಕೀಯ, ಸ್ವಾರ್ಥತೆ ಮರೆತು ಜನಪ್ರತಿನಿಧಿಗಳು, ಸರ್ಕಾರ ಮಾನವೀಯ ದೃಷ್ಟಿಯಿಂದ ನೀರುತಂದು ಪುಣ್ಯಕಟ್ಟಿಕೊಳ್ಳಲಿ ಎನ್ನುವುದು ಈ ಭಾಗದ ಜನರ ಆಶಯವಾಗಿದೆ. ಜನರಲ್ಲಿ ಜಾಗೃತಿ, ಒಗ್ಗಟ್ಟು, ರಾಜಕೀಯ ರಹಿತ ಬೆಂಬಲದ ಅವಶ್ಯಕತೆ ಇದೆ.

author
Bhairappa Halappagol  karagaon

Tuesday, 21 May 2019

ಕರಗಾಂವದ ಬೀರದೇವರ ದೇವಸ್ಥಾನದ ಪರಿಚಯ ಮತ್ತು ಹಿನ್ನೆಲೆ

 ಕರಗಾಂವದ ಬೀರದೇವರ ದೇವಸ್ಥಾನ :ಪರಿಚಯ ಮತ್ತು ಹಿನ್ನೆಲೆ
ಕರಗಾಂವ ಎಂದರೆ ತಟ್ಟನೆ ಹೊಳೆಯುವುದು ಕರಗಾಂವದ ಬೀರದೇವರು. ಕರಗಾಂವ ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಒಂದು ಗ್ರಾಮ. ಇದು ಚಿಕ್ಕೋಡಿ  ಪಟ್ಟಣದಿಂದ  18 ಕಿ. ಮೀ ಅಂತರದಲ್ಲಿದೆ. ಕರಗಾಂವ ಗ್ರಾಮದ ಬೀರದೇವರ ದೇವಸ್ಥಾನ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರ ಭಾಗಗಳಲ್ಲಿ ಭಕ್ತ ಸಮೂಹ ಹೊಂದಿದೆ. ಈಗ ಇರುವ ಕರಗಾಂವ ಗ್ರಾಮ ಕ್ಕಿಂತ ಮೈದಲು ಇಲ್ಲಿಂದ ಸುಮಾರು 2 ಮೈಲಿ ಅಂತರದಲ್ಲಿ "ಚೆನ್ನವೀರಹಟ್ಟಿ" ಎಂಬ ಒಂದು ಪ್ರದೇಶವಿತ್ತು. ಆ ಚೆನ್ನವೀರಹಟ್ಟಿಯನ್ನು ಒಬ್ಬ ಗೌಡ ಆಳುತ್ತಿದ್ದ, ಆ ಗೌಡನ ಮನೆಯಲ್ಲಿ ದೊಡ್ಡ ಆಕಳುಗಳ ಹಿಂಡು ಇತ್ತು. ಈ ಆಕಳುಗಳ ಹಿಂಡು ದಿನನಿತ್ಯ ಮೇಯಲು ಈಗಿರುವ ಕರಗಾಂವ ಗ್ರಾಮದ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿತ್ತು.  ಆ ಕಾಲದಲ್ಲಿ ಕರಗಾಂವ ಗ್ರಾಮದ ಪ್ರದೇಶದಲ್ಲಿ ಅತಿಯಾದ ಪಡುಗಳ್ಳಿ ಇತ್ತು.ಇಲ್ಲಿ ಮೇಯಲು ಎಲ್ಲ ಜನರ ದನಕರುಗಳು ಬರುತ್ತಿದ್ದವು. ಅಲ್ಲಿಯೇ ಗೌಡನ ಆಕಳುಗಳು ಕೂಡಾ ಮೇಯಲು ಬರುತ್ತಿದ್ದವು. ಹೀಗೆ ಬರುವ ಆಕಳುಗಳ ಹಿಂಡು ಹೊಟ್ಟೆ ತುಂಬಾ ಮೇಯ್ದು ಸಾಯಂಕಾಲ ಮನೆಗೆ ಹೋಗುತ್ತಿದ್ದವು. ಒಂದು ದಿನ ಗೌಡನು ಎಂದಿನಂತೆ ಆಕಳ ಹಾಲು ಹಿಂಡಲು ಮುಂದಾಗುತ್ತಾನೆ. ಅಲ್ಲಿರುವ ಎಲ್ಲ ಆಕಳುಗಳು ಎಂದಿನಂತೆ ಹಾಲನ್ನು ನೀಡುತ್ತವೆ. ಆದರೆ ಒಂದು ಆಕಳು ಮಾತ್ರ ಹಾಲನ್ನು ಕೊಡಲಿಲ್ಲ. ಹೀಗೆ ಎರಡು ಮೂರು ದಿನಗಳ ಕಾಲ ಆಕಳು ಹಾಲನ್ನು ನೀಡಲಿಲ್ಲ. ಸಂಶಯಗೊಂಡ ಗೌಡನು  ಆಕಳುಗಳು ಮೇಯುವ ಸ್ಥಳಕ್ಕೆ ಬಂದ  ಆಕಳುಗಳ ಹಿಂಡು ಎಲ್ಲವೂ ಎಂದಿನಂತೆ ಮೇಯಲು ಪ್ರಾರಂಬಿಸಿತು. ಆದರೆ ಒಂದು ಕಪ್ಪು ಆಕಳು  ಈಗ ಇರುವ ಬೀರದೇವರ ದೇವಸ್ಥಾನ ಜಾಗದಲ್ಲಿ ಮೊದಲು ದಟ್ಟ ಪಡುಗಳ್ಳಿ ಬೆಳೆಯುತ್ತಿತ್ತು ಈ ಕಳ್ಳಿಯಲ್ಲಿ ಒಂದು ಹಾವಿನ ಗುತ್ತಿ ಇತ್ತು ಅದರ ಮೇಲೆ ಆಕಳು ಹಾಲು ನೀಡುವ ದೃಶ್ಯವನ್ನು ಆ ಗೌಡ ಕಣ್ಣಾರೆ ಕಂಡು  ಆಶ್ಚರ್ಯಚಕಿತನಾದನು. ಸಂತೋಷದಿಂದ ಓಡಿ ಹೋಗಿ ಚನ್ನವೀರಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸುದ್ದಿ ತಿಳಿಸಿದ. ಸುದ್ದಿ ಗಾಳಿಸುದ್ದಿಯಂತೆ ಎಲ್ಲಕಡೆ ಹರಡಿತು ಸಾಕಷ್ಟು ಜನರು ಬಂದು ದಿನನಿತ್ಯ ಆಕಳು ಗುತ್ತಿಯ ಮೇಲೆ ಹಾಲು ನೀಡುವ ದೃಶ್ಯ ನೋಡಿದರು. ಎಲ್ಲರೂ ಯೋಚನೆ ಮಾಡಿ ಗುತ್ತಿಯಲ್ಲಿ ಏನಿರಬೇಕೆಂದು ತಿಳಿದುಕೊಳ್ಳಲು ಕುತೂಹಲದಿಂದ ಗುತ್ತಿ ಅಗೆದು ಅಲ್ಲಿ ಹುತ್ತದಲ್ಲಿ ಋಷಿ ರೂಪದ ವ್ಯಕ್ತಿ ಕಾಣಸಿಗುತ್ತಾನೆ. ಆಗ ಎಲ್ಲ ಜನರು ಈ ವ್ಯಕ್ತಿ ಸಾಮಾನ್ಯ ವ್ಯಕ್ತಿಅಲ್ಲ ಅವನು ಮಹಾನ್ ಋಷಿಮುನಿ  ಎಂದು ಅವನಿಗೆ ಖರೇಸಿದ್ದ ಎಂದು ನಾಮಕರಣ ಮಾಡಿದರು. ಮುಂದೆ  ಅದೇ ಜಾಗದಲ್ಲಿ ದೇವಸ್ಥಾನ ಕಟ್ಟಿಸಿ ಖರೇಸಿದ್ದನ ಪೂಜಾ ಕಾರ್ಯಗಳು  ನೆರವೇರುತ್ತವೆ. ಮುಂದೆ ಜನರ ಆಡು ಭಾಷೆಯಲ್ಲಿ ಕರಿಸಿದ್ದ ಎಂದು ಹೆಸರು ಪ್ರಚಲಿತಗೊಳ್ಳುತ್ತದೆ. ಗ್ರಾಮಕ್ಕೆ ಕೂಡಾ ಖರೇಗಾಂವ ಎಂಬ ಹೆಸರು ಬರುತ್ತದೆ ಮುಂದೆ ಕ್ರಮೇಣ ಕರಗಾಂವ ಎಂಬ ಹೆಸರು ರೂಡಿಗೆ ಬರುತ್ತದೆ. ಅಂದಿನಿಂದ ಇಂದಿನವರೆಗೆ ದೇವಸ್ಥಾನದ ಬೆಳವಣಿಗೆ ಕರ್ನಾಟಕದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ ಮತ್ತು ಮಹಾರಾಷ್ಟ್ರದಲ್ಲಿ ಸಾಂಗ್ಲಿ, ಕೊಲ್ಲಾಪುರ, ಪುಣೆ, ಸೊಲ್ಲಾಪುರ ಜಿಲ್ಲೆಗಳಿಂದ ಬಹುಸಂಖ್ಯಾತ ಜನರು ದೇವರ ದರ್ಶನಕ್ಕೆ ಬರುತ್ತಾರೆ.

ಉಸ್ತುವಾರಿ - ಕರಗಾಂವ ಗ್ರಾಮದ ಬೀರದೇವರ ದೇವಸ್ಥಾನದ ಉಸ್ತುವಾರಿ ಕರಗಾಂವದ ಡಿ ಟಿ ಪಾಟೀಲ ಕರಗಾಂವ, ಎಸ್ ಆರ್ ಪಾಟೀಲ ಕುಟುಂಬಗಳು ಹೊತ್ತಿದ್ದು, ಪೂಜಾ ಕಾರ್ಯವನ್ನು ಕುರುಬ ಸಮುದಾಯದ ಜನರು ನಿರ್ವಹಿಸುತ್ತಾರೆ.

ಪವಾಡಗಳಿಗೆ ಪ್ರಸಿದ್ಧವಾದ ಕರಗಾಂವದ ಬೀರಸಿದ್ದೇಶ್ವರ ದೇವಾಲಯ-
ಕರಗಾಂವ ಗ್ರಾಮದ  ಐತಿಹಾಸಿಕ ಬೀರದೇವರು ಮೊದಲಿನಿಂದಲೂ ಗಾಂಜಾ ಸೇವಿಸುತ್ತಿರುವುದು ವಿಶೇಷ. ಸರ್ಕಾರದ ಕಾಯ್ದೆ ಕಾನೂನುಗಳ ಪ್ರಕಾರ ಗಾಂಜಾ ಸೇವನೆ ಬಳಕೆ ನಿಷೇಧ ಮಾಡಲಾಗಿದೆ ಕೆಲವು ದಶಕಗಳ ಹಿಂದೆ ಕೆಲವು ಪೋಲಿಸ್ ಅಧಿಕಾರಿಗಳು ಗಾಂಜಾ ತಡೆಯಲು ಬಂದಾಗ ಅವರ ಕಣ್ಣು ಕುರುಡಾಗಿ, ಅನಾರೋಗ್ಯ ಕಾಡಿತು ಆಗತಕ್ಷಣ ಬೇಡಿಕೊಂಡ ಪೋಲಿಸ್ ಅಧಿಕಾರಿ ದೇವರಿಗೆ ಪ್ರತಿ ವರ್ಷ ಗಾಂಜಾ ನೀಡಲು ಮುಂದಾಗುತ್ತಾನೆ ಆಗ ಕರಗಾಂವ ಗ್ರಾಮದ ಬೀರದೇವರ ಮಹಿಮೆಯಿಂದ  ಪೋಲಿಸ್ ಅಧಿಕಾರಿಗಳಿಗೆ  ಕಣ್ಣು ಬರುತ್ತವೆ ಅಂದಿನಿಂದ ಇಂದಿನವರೆಗೆ ಪೋಲಿಸ್ ಅಧಿಕಾರಿಗಳ ಕುಟುಂಬದವರು ದೇವರಿಗೆ ಗಾಂಜಾ ನೀಡುತ್ತಾರೆ. ಅವರಷ್ಟೆ ಅಲ್ಲ ಹಲವಾರು ಭಕ್ತರು ದೇವರಿಗೆ ಭಕ್ತಿಯಿಂದ ಗಾಂಜಾ ನೀಡುತ್ತಾರೆ.

ಹಲವು ವಿಶೇಷಗಳಿಗೆ ಸಾಕ್ಷಿ -
ಕರಗಾಂವದ ಬೀರದೇವರು ಅಪಾರ ಭಕ್ತ ಸಮೂಹ ಹೊಂದಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳು, ಗಾಳಿಯಾದ ವ್ಯಕ್ತಿಗಳು ದೇವರ ಆರಾಧನೆ ಮಾಡಿದರೆ ಸಂಪೂರ್ಣವಾಗಿ ಎಲ್ಲವೂ ಕಡಿಮೆಯಾಗುತ್ತದೆ. ಇನ್ನೂ ಬೇಡಿಕೊಂಡ ಎಲ್ಲ ಕಾರ್ಯಗಳು ಇಡೇರುತ್ತವೆ. ಪ್ರಮುಖವಾಗಿ ಉದಾಹರಣೆ ಎಂದರೆ ಮಕ್ಕಳಿಲ್ಲದ ದಂಪತಿಗಳು ದೇವರಿಗೆ ಭಕ್ತಿಯಿಂದ ನಡೆದುಕೊಂಡಾಗ ಅವರಿಗೆ ಮಕ್ಕಳಾದ ಅದೆಷ್ಟೋ ಉದಾಹರಣೆ ಈಗಲೂ ಚಾಲ್ತಿಯಲ್ಲಿವೆ. ವಿವಾಹ ಸಂಬಂಧಗಳು ಕೂಡಿ ಬರದ ವದು ವರರು ಬೇಡಿಕೊಂಡಾಗ ಅವರಿಗೆ  ವಿವಾಹ ಭಾಗ್ಯ ಒದಗಿಬಂದಿರುವ ಘಟನೆಗಳು ಕೂಡಾ ನೂರಾರು.
ಹೀಗೆ ನೀರಿನ ಭವನೆಯಿಂದ ತತ್ತರಿಸಿರುವ ವ್ಯಕ್ತಿಗಳು  ದೇವರ ಬಳಿ ಬಂದು ಬೇಡಿಕೊಂಡು ದೇವರ ನುಡಿ ಕೇಳಿದಾಗ, ಕವಲು ಹಾಕಿದಾಗ ಉತ್ತಮ ನೀರು ಲಭಿಸಿವೆ. ಹೀಗೆ ಜೀವನದ ಹಲವಾರು ಸಮಸ್ಯೆಗಳನ್ನು ಜನರು ದೇವರ ಬಳಿ ಕೇಳಿದಾಗ ದೇವರು ಎಲ್ಲರಿಗೂ ಪರಿಹಾರ ಒದಗಿಸಿದ್ದಾನೆ.

ಬೀರದೇವರ ನಾಯಕತ್ವ - ಕರಗಾಂವದ ಬೀರದೇವರು ಹಾಗೂ ನಾಗರಮುನ್ನೋಳಿಯ ಮತ್ತು ಕಬ್ಬೂರದ ಹಾಲಸಿದ್ದ ದೇವರುಗಳ ಮದ್ಯೆ ಯುದ್ಧ ನಡೆದಾಗ ಕರಗಾಂವ ಬೀರದೇವರು ಗೆಲುವು ಸಾಧಿಸಿದ್ದ ಎನ್ನುವ ಸಂಗತಿಗಳು ನಡೆದುಹೋಗಿದ್ದವು. ಹಾಗೆಯೇ ಯಡೂರ ಹೊಳೆಗೆ ದೇವರು ಹೋದಾಗ ಎಲ್ಲ ದೇವರುಗಳು   ಬಂದು ಕರಗಾಂವ ಬೀರದೇವರಿಗೆ ಶರನಾಗುತ್ತವೆ ಎಂಬ ವಿಚಾರ ಇನ್ನು ಜಾರಿಯಲ್ಲಿದೆ. ಕರಗಾಂವದ ಬೀರದೇವರು ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಮುಂದಾಳತ್ವ ವಹಿಸಿದ್ದು  ಕೂಡಾ ನೋಡಬಹುದು. ಯಾದಗೂಡದ ಬೀರದೇವರು ಮತ್ತು ಕರಗಾಂವದ ಬೀರದೇವರಿಗೆ ಇನ್ನೂ ಕೊಡಾ ವೈಮನಸ್ಸು  ಇದೆ ಯಾದಗೂಡದ ಬೀರದೇವರಿಗೆ ಹೋಗಿ ಕರಗಾಂವದ ಬೀರದೇವರಿಗೆ ಹೋಗಬಾರದು ಎಂಬ ಮಾತು ಚಾಲ್ತಿಯಲ್ಲಿದೆ. ಇನ್ನೂ ಕೂಡಾ ಅಕ್ಕಪಕ್ಕದಲ್ಲಿ ಇರುವ ಯಾದಗೂಡದ ಬೀರದೇವರಿಗೆ ಕರಗಾಂವದ ಜನ ಹೆಚ್ಚಾಗಿ ಹೋಗುವುದಿಲ್ಲ. ಕರಗಾಂವದ ಬೀರದೇವರು ಸತ್ಯಕ್ಕೆ ಹೆಸರಾಗಿದ್ದಾನೆ.

ಅಮಾವಾಸ್ಯೆ, ಗುರುವಾರ, ರವಿವಾರದಂದು ಅಪಾರ ಭಕ್ತಗಣ ಬೇಟಿ-
ಕರಗಾಂವ ಗ್ರಾಮಕ್ಕೆ ದೂರ ದೂರದ ಊರುಗಳಿಂದ ಬರುವ ಭಕ್ತರು  ಅಮಾವಾಸ್ಯೆ, ದೇವರ ವಾರ ಗುರುವಾರ ಮತ್ತು ರವಿವಾರದಂದು ಸಹಸ್ರಾರು ಸಂಖ್ಯೆಯಲ್ಲಿ ಬೇಟಿನೀಡುತ್ತಾರೆ. ಆಗ ಭಕ್ತರಿಂದ ಭಕ್ತರಿಗಾಗಿ ಅನ್ನದಾಸೋಹ ಇರುತ್ತದೆ.
         ಭಕ್ತರೂ ತಮ್ಮ ಕುಟುಂಬದಲ್ಲಿ ಸಂಪತ್ತು ವೃದ್ದಿಸಿದ್ದಕ್ಕಾಗಿ ದೇವರ ಪಲ್ಲಕ್ಕಿಯನ್ನು   ಮನೆಮನೆಗೆ ಕರೆದುಕೊಂಡು ಹೋಗಿ ಅನ್ನದಾಸೋಹ ಮಾಡುತ್ತಾರೆ.

ವರ್ಷಕ್ಕೆ ಎರಡು ಭಾರಿ ಬೃಹತ್ ಜಾತ್ರೆ
ಕರಗಾಂವ ಗ್ರಾಮದಲ್ಲಿ ಒಂದೇ ದೇವರಿಗೆ ವರ್ಷದಲ್ಲಿ ಎರಡು ಭಾರಿ  ಬೃಹತ್ ಜಾತ್ರೆ ನಡೆಯುತ್ತದೆ. ಒಮ್ಮೆ ಮೇ ತಿಂಗಳಲ್ಲಿ ಆಗಿ ಹುಣ್ಣಿಮೆಯ ಮುಗಿದು ಮೂರನೇ ದಿನದಂದು ಹುಟ್ಟು ಹಬ್ಬ ಆಚರಣೆ ಮತ್ತು ದೀಪಾವಳಿಯಲ್ಲಿ    ಐದು ದಿನಗಳ ಬೃಹತ್ ಜಾತ್ರೆ ನಡೆಯುತ್ತದೆ.

ಹುಟ್ಟು ಹಬ್ಬ ಜಾತ್ರೆ ಆಚರಣೆ - ಪ್ರತಿವರ್ಷ ಆಗಿ ಹುಣ್ಣಿಮೆ ಆದ ಎರಡನೇ ದಿನದಂದು ಸಾಯಂಕಾಲ  ಎಲ್ಲ ಗ್ರಾಮಗಳಿಂದ ವಾಲಗ ಕೂಡುವುದು ನಂತರ ದೇವರ ಸಮ್ಮುಖದಲ್ಲಿ  ವಾದ್ಯ ಬಾರಿಸುವುದು. ರಾತ್ರಿ 10.00 ಗಂಟೆಗೆ ಡೊಳ್ಳಿನ ಪದ ಗಾಯನ, ಮರುದಿನ ನಸುಕಿನ ಜಾವ 05. 00 ಗಂಟೆಗೆ ಬೀರದೇವರ ಗದ್ದುಗೆಗೆ ಅಭಿಷೇಕ  ಕಾರ್ಯ, ತೊಟ್ಟಿಲೋತ್ಸವ, ಹೊವು ಹಾರಿಸುವುದು, ಪಲ್ಲಕ್ಕಿ ಮೆರವಣಿಗೆ, ದೇವರ ನುಡಿ, ಮಹಾಪ್ರಸಾದ ಹೀಗೆ ಹಲವಾರು ಕಾರ್ಯಕ್ರಮಗಳು ಜಾರಿಗೆ ಬರುತ್ತವೆ. ಜಾತ್ರೆ ಪ್ರಯುಕ್ತ ಜಾತ್ರಾ ಕಮಿಟಿಯಿಂದ ಸೈಕಲ್ ಶರ್ಯತ್ತು, ಕುದುರೆ ಶರ್ಯತ್ತು, ಎತ್ತಿನ ಬಂಡಿ ಶರ್ಯತ್ತು, ನಡೆಯುತ್ತವೆ. ಈ ದಿನ ರಾತ್ರಿ ಗ್ರಾಮದ ಬಯಲು ರಂಗಮಂದಿರದಲ್ಲಿ ಸಾಮಾಜಿಕ ನಾಟಕ ಪ್ರದರ್ಶನ ಆಗುತ್ತದೆ.

ದೀಪಾವಳಿ ಜಾತ್ರೆ -
ದೀಪಾವಳಿ ಜಾತ್ರೆಯು ಅತಿ ವಿಜ್ರಂಭಣೆಯಿಂದ ಜರುಗುತ್ತದೆ.  ಭರಮನ ಹಬ್ಬದ ದಿನದಂದು ದೇವರು ಗ್ರಾಮದ ಹೊರ ವಲಯದ ಬ್ರಹ್ಮ ದೇವರ ಗಿಡಕ್ಕೆ ಬೇಟಿ ನೀಡುತ್ತದೆ. ನಂತರ ಚತುರ್ದೇಶಿ ದಿನ, ಅಮಾವಾಸ್ಯೆ, ಪಾಡ್ಯ ದಂದು ಬೀರದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.   ನಂತರ ಮರುದಿನ   ದೇವರ ಪಲ್ಲಕ್ಕಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಅಂಬಲಿ ನೈವೇದ್ಯ ಪಡೆಯುತ್ತಾ ಸಾಗುತ್ತದೆ ಹೀಗೆ ಮೂರು ದಿನಗಳ   ಕಾಲ ಗ್ರಾಮದ ಎಲ್ಲ ಮನೆಗಳಿಗೆ ಸುತ್ತಿ ನೈವೇದ್ಯ ಪಡೆಯುತ್ತಾನೆ. ಗ್ರಾಮಸ್ಥರು ಬೆಳೆದ ಕಬ್ಬಿನ ಬೆಳೆಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಒಯ್ಯಲಾಗುತ್ತದೆ. ಗ್ರಾಮಸ್ಥರಿಂದ ಬಯಲು ರಂಗಮಂದಿರದಲ್ಲಿ ಸಾಮಾಜಿಕ ನಾಟಕ, ಪಾರಿಜಾತ, ಶಾಹಿರಗಾನ, ಡೊಳ್ಳು ಕುಣಿತ, ಡೊಳ್ಳಿನ ಪದಗಳು ಜರಗುತ್ತವೆ. ಭಕ್ತರು ಅಂಬಲಿ ಕೊಡಗಳ ಮೂಲಕ  ದೀಡ ನಮಸ್ಕಾರ ಹಾಕುತ್ತಾರೆ. ಜಾತ್ರೆಯ ದಿನದಂದು ದೇವರು ದೇವಸ್ಥಾನ ಸೇರುತ್ತದೆ, ದೇವನುಡಿ, ಮಹಾಪ್ರಸಾದ ಸೇವೆ, ಬೃಹತ್ ಕುಸ್ತಿ ಪಂದ್ಯಾವಳಿ ಹೀಗೆ ಹಲವಾರು ಚಟುವಟಿಕೆಗಳು  ಜರುಗುತ್ತವೆ.

ಕಲಾವಿದರಿಗೆ ಪ್ರೋತ್ಸಾಹ
ದೇವಸ್ಥಾನದಲ್ಲಿ ಡೊಳ್ಳು ಕುಣಿತ, ಡೊಳ್ಳಿನ ಪದಗಳು, ಭಜನಾ ಪದಗಳು, ಭಕ್ತಿಗೀತೆಗಳನ್ನೂ ಮಕ್ಕಳಿಗೆ ಕಲಿಸಿಕೊಟ್ಟು  ಅವರ ಕಲೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಗ್ರಾಮದ ಪೂಜಾರಿಗಳು, ಕುರುಬ ಸಮುದಾಯದ ಮುಖಂಡರು ಮಾಡುತ್ತಾರೆ.

ಕೊನೆಯ ಮಾತು -
ದೇವರ ದೇವಸ್ಥಾನಕ್ಕೆ ಭಕ್ತರು ತನು ಮನ ಧನದಿಂದ ಭಕ್ತಿ ಸಲ್ಲಿಸಿ ದೇವರ ಏಳಿಗೆಗೆ ಕಾರಣಿಬೂತರಾಗಿದ್ದಾರೆ. ದೇವರ ದೇವಸ್ಥಾನ ಕೊಡಾ ಅತಿ ವೇಗದಿಂದ ಬೆಳವಣಿಗೆ ಹೊಂದುತ್ತಿದೆ. ಬೀರದೇವರ ಕುರಿತು ಚಿಕ್ಕ ಸಾಹಿತ್ಯ ರಚಿಸಿದ್ದಕ್ಕೆ ತುಂಬಾ ಸಂತೋಷ ಅನಿಸುತ್ತದೆ ಬೀರದೇವರ ಕಾರ್ಯಚಟುವಟಿಕೆಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅನಿಸುತ್ತದೆ. ಆದರೂ ಉತ್ತಮ ಮಾಹಿತಿ ಕಲೆ ಹಾಕುವ ಯತ್ನ ಮಾಡಿದ್ದೇನೆ . ಆ ಬೀರದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಮಳೆ ಬೆಳೆ ಉತ್ತಮ ಆಗಲಿ ಅನ್ನೋದೇ ನನ್ನ ಆಶಯ. ಧನ್ಯವಾದಗಳು


ಭೈರಪ್ಪ ಹಾಲಪ್ಪಗೋಳ ಕರಗಾಂವ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು ಚಿನ್ನದ ಪದಕ ವಿಜೇತರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

Monday, 20 May 2019

ಕರಗಾಂವದ ಜಡಿಸಿಧ್ಧಾಶ್ರಮ ಮಠದ ಪರಿಚಯ ಮತ್ತು ಹಿನ್ನೆಲೆ

ಕರಗಾಂವದ ಜಡಿಸಿಧ್ಧಾಶ್ರಮ ಮಠದ  ಪರಿಚಯ ಮತ್ತು ಹಿನ್ನೆಲೆ-
                                ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕರಗಾಂವ ಗ್ರಾಮದ ಜಡಿಸಿದ್ದಾಶ್ರಮ ಮಠ  ಪವಾಡಗಳಿಗೆ   ಪ್ರಸಿದ್ಧವಾದ ಮಠ . ಕರಗಾಂವದ ಜಡಿಸಿದ್ದಾಶ್ರಮ  ಹಲವಾರು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಪ್ರಸಿದ್ಧ. ಕರಗಾಂವ ಗ್ರಾಮದ ಪ್ರಮುಖ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸೇವಾ ಕೇಂದ್ರ ಇದಾಗಿದೆ. ಈ ಮಠವು 1954 ರಲ್ಲಿ ಸ್ಥಾಪನೆಯಾಗಿದೆ ಇದಕ್ಕಿಂತ ಮೊದಲು ಕರಗಾಂವದಲ್ಲಿ ಜಡಿಸಿದ್ದೇಶ್ವರರ ಆರಾಧನೆ ನಡೆಯುತ್ತಿತ್ತು. ಈಗೀನ ಮಠದ ಸ್ಥಳದಲ್ಲಿ ಮೊದಲು ಚಿಕ್ಕದಾದ ಅಗ್ನಿಕುಂಡ ಮಾತ್ರ ವಿತ್ತು ಎಲ್ಲರೂ ಇದಕ್ಕೆ ನಮಸ್ಕರಿಸಿ ಹೋಗುತ್ತಿದ್ದರು. ಆಗ ಕಿರಿದಾದ ಜಾಗದಲ್ಲಿ ಪಡುಗಳ್ಳಿಗಳ ಮದ್ಯೆ ಈ ಅಗ್ನಿಕುಂಡ ಇತ್ತು ನಂತರ 1954 ರ ಹೊತ್ತಿಗೆ ಹ ಮಠದ ಈಗೀನ ಕಟ್ಟಡ ಕಟ್ಟಲು ಆರಂಭಿಸಿದರು . ಆಗ ಅದರ ಪ್ರಮುಖ ಶಿಲ್ಪಗಳೆಂದರೆ ಕರಿಂಸಾಬ್ ನದಾಫ್ ಅವರೊಂದಿಗೆ ವಡ್ಡರ ಸಮುದಾಯ ಹಾಗೂ ಇಡೀ ಗ್ರಾಮಸ್ಥರು ಈ ಮಠದ ಕಟ್ಟಡ ಕಟ್ಟಲು ಮುಂದೆ ಬಂದರು. ಮಠಕ್ಕೆ ಸಾಟಾ ಮಾಡಲು ಅಂಕಲಿ ಬಡಿಗರು ಕಾರ್ಯ ನಿರ್ವಹಿಸಿದ್ದರ. ಈ ಮಠವನ್ನು ಸ್ವತಃ ಶಂಕರಾನಂದ ಪರಮಹಂಸರು ನೇತೃತ್ವ ವಹಿಸಿ ಕಟ್ಟಿಸಿದ್ದು, ಅವರು ಮೇಲಿಂದ ಮೇಲೆ ಕರಗಾಂವ ಗ್ರಾಮಕ್ಕೆ ಭೇಟಿ   ನೀಡುತ್ತಿದ್ದರು.

ಮಠದ  ಪ್ರಾರಂಬಿಕ  ಪ್ರಮುಖ ಉಸ್ತುವಾರಿಗಳು -
                          ಶ್ರೀ  ಡಿ ಟಿ ಪಾಟೀಲ ಕರಗಾಂವ, ಎಸ್ ಆರ್ ಪಾಟೀಲ, ಬಾಪುಗೌಡ ಕಲಗೌಡ ಪಾಟೀಲ್, ಹರಿಬಲವಂತ ಕುಲಕರ್ಣಿ, ಅಪ್ಪಣ್ಣ ಕುಲಕರ್ಣಿ ಡೋಣವಾಡ, ಸಿದಗೌಡಾ ಗುರುಸಿದ್ದಗೌಡ ಪಾಟೀಲ, ಸಂತ ಮಹಾರಾಜ ಮಲ್ಲಪ್ಪ ಕೊಟ್ರೆ, ಬಾಬಾಜಿ ಸನದಿ, ಸಿದ್ದಪ್ಪ ಧರೆಪ್ಪಾ ಉಪ್ಪಾರ (ಹಾಲಪ್ಪಗೋಳ), ರಾವಸಾಹೇಬ ಖೋತ, ಗಣಪತಿ ಘೋರ್ಪಡೆ, ಚನ್ನಮಲ್ಲ ಕಮತೆ, ಅಪ್ಪಣ್ಣ ಬಡಿಗೇರ, ಬೀಮು ಬಡಿಗೇರ, ಬಸಪ್ಪ ಅಮ್ಮೀನಬಾಂವಿ ಪ್ರಮುಖರು. ಅಂದಿನಿಂದ ಇಂದಿನವರೆಗೆ ಹಲವಾರು ಮುಖಂಡರು, ಸಂತರು ಗ್ರಾಮಸ್ಥರು ದುಡಿಯುತ್ತಿದ್ದಾರೆ.

ಪವಾಡಗಳಿಗೆ ಪ್ರಸಿದ್ಧವಾಗಿದೆ ಈ ಜಡಿಸಿದ್ದಾಶ್ರಮ ಮಠ
                                 ಮೊದಲಿನಿಂದಲೂ ಆಧ್ಯಾತ್ಮಿಕ, ಧಾರ್ಮಿಕ, ಸೇವಾ ಕಾರ್ಯಗಳಿಗೆ ಈ ಕರಗಾಂವದ ಜಡಿಸಿದ್ದಾಶ್ರಮ ಹೆಸರುವಾಸಿ. ಇಲ್ಲಿ ಹಲವಾರು ಪವಾಡಗು   ನಡೆದು ಹೋಗಿವೆ. ಅವು ಸಾಕುಪ್ರಾಣಿಗಳಿಗೆ ಹಾವು ಕಚ್ಚುವುದು, ಜನರಿಗೆ ಹಾವು ಕಚ್ಚುವುದು ನಡೆದರೆ ಕರಗಾಂವ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾವು ಕಚ್ಚಿದ ವ್ಯಕ್ತಿ ಹಾಗೂ ಸಾಕುಪ್ರಾಣಿಗಳನ್ನು ತಂದು ಮಠದ ಐದು ಸುತ್ತು ಹಾಕಿ ಮಂತ್ರ, ಭಜನೆ ಮೂಲಕ ಆರಾಧನೆ ಮಾಡಿದರೆ ಹಾವಿನ ವಿಷ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಇಂತಹ ಅದೆಷ್ಟೋ ಘಟನೆಗಳಿಗೆ ಈ ಜಡಿಸಿದ್ದಾಶ್ರಮ ಹೆಸರುವಾಸಿಯಾಗಿದೆ. ಹಾವು, ಚೇಳು ಸೇರಿ ವಿಷಜಂತುಗಳು ಕಡಿದರೂ ಈ ಭಾಗದ ಜನ ಈ ಮಠಕ್ಕೆ ನಡೆದುಕೊಂಡರೆ  ಎಲ್ಲವೂ ಪರಿಹಾರ ಆಗುತ್ತದೆ ಎಂಬ ನಂಬಿಕೆ ಈ ಗ್ರಾಮಸ್ಥರದ್ದು.  ಹಿಂದೆ ಸ್ವಾಮೀಜಿಗಳು ಮಠದ ಮಂತ್ರದ ಕಟ್ಟೆಗೆ ಹಾವು ಸುತ್ತಿಸಿ ಮಂತ್ರ ಹಾಕಿ, ಎರಡು ಬಾವಿಗೆ ಮಂತ್ರಹಾಕಿ     ಹೋಗಿದ್ದರು   ಅಂದಿನಿಂದ ಇಲ್ಲಿಯವರೆಗೆ  ಸುತ್ತಮುತ್ತಲಿನ ಗ್ರಾಮಸ್ಥರು ಈ ಮಠದ ದೇವರಿಗೆ ಭಕ್ತಿ ಪೂರ್ವಕವಾಗಿ  ನಡೆದುಕೊಳ್ಳುತ್ತಿದ್ದಾರೆ.  ಮಠ  ಕಟ್ಟಿಸುವ ಸಮಯದಲ್ಲಿ ಕಾರಣಾಂತರಗಳಿಂದ ಶಂಕರಾನಂದ ಶ್ರೀಗಳ  ಬೆರಳು ಕತ್ತರಿಸಿತ್ತು ಆಗ ಮುಪ್ಪಾದ ಮುದುಕ ಪರಮಹಂಸ ಬಿರುದು ನಿನಗೇಕೆ ಎಂದು ಕೇಳಿದ? ಹಿರಿಯ ಮುದುಕ ಮಾತನ್ನು ಮುಂದು ವರೆಸಿ  ನಿನಗೆ ಬೆರಳು ಬೇಕಾದರೆ ದೇವರಿಗೆ ಕಠಿಣ ತಪಸ್ಸಿನ ಮೂಲಕ ನಡೆದುಕೊ ಎಂದನು ಆಗ ಚಿಂತಿತರಾದ ಶಂಕರಾನಂದ ಶ್ರೀಗಳು ಕಠಿಣ ಮೂರು ತಿಂಗಳ  ತಪಸ್ಸಿನ ಮೂಲಕ  ತಮ್ಮ ಮೊದಲಿನ ಸ್ಥಿತಿಗೆ ತಮ್ಮ ಬೆರಳು ಚಿಗರೂಡೆದ ಘಟನೆ ಜಗತ್ತಿನಲ್ಲಿ ಒಂದು ಸಂಚಲನವನ್ನು ಮೂಡಿಸಿದ ಘಟನೆಯಾಗಿತ್ತು. ಆಗ ಇಂತಹ ಮಹಾನ್ ಪವಾಡ ದಿಂದ ಇವರಿಗೆ ಪರಮಹಂಸ ಎಂಬ ಬಿರುದು ಲಭಿಸಿತು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ -
                               ಜಡಿಸಿದ್ದಾಶ್ರಮ ಮಠದ ಮುಖ್ಯ ಮಠ ಜಡಿಸಿದ್ದಾಶ್ರಮ ಹುಬ್ಬಳ್ಳಿಯಲ್ಲಿ ಇದೆ. ಈ ಮಠವು  ಅದ್ವೈತ ಸಿದ್ಧಾಂತದ ತತ್ವಗಳನ್ನು ಪ್ರತಿಪಾದನೆ ಮಾಡುತ್ತಾ ಬರುತ್ತಿದೆ. ಶಂಕರಾನಂದ ಪರಮಹಂಸರು ಕೊಡಾ ಈ ಮಠದ ಬೆಳವಣಿಗೆಗೆ ಪ್ರಮುಖರು . ಗ್ರಾಮದಲ್ಲಿ ಯಾವುದೇ ಜಾತಿ, ಧರ್ಮ ಬೇದ ಬಾವ ವಿಲ್ಲದೆ ಮಠಕ್ಕೆ  ನಡೆದುಕೊಳ್ಳುತ್ತಾರೆ. 1960 ರ ಸಮಯದಲ್ಲಿ ಖಾತೆದಾರ ಮತ್ತು ಕುಲಕರ್ಣಿ ಕುಟುಂಬಗಳ ಮೂಲಕ ಕೃಷಿ ಶಿಬಿರ ನಡೆಸಲಾಗಿತ್ತು ಎಂದು ಗ್ರಾಮದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾದ ಬಾಬು ಕೊಟ್ರೆ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. 1993 ರವರೆಗೆ ಮಾತ್ರ ಜಡಿಸಿದ್ದೇಶ್ವರ ಮಹಾರಾಜರ ಪುಣ್ಯತಿಥಿ ಆಚರಣೆ ನಡೆಸಲಾಗುತ್ತಿತ್ತು ಕಾರಣಾಂತರಗಳಿಂದ ಈ ಪುಣ್ಯತಿಥಿ ಸಮಾರಂಭ ನಿಂತು ತದನಂತರ 1994ರಿಂದ. ಈ ಮಠದಲ್ಲಿ  ವರ್ಷಕ್ಕೊಮ್ಮೆ  ಇಂಚಲದ ಶ್ರೀ ಶ್ರೀ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು, ಪಿ ಜಿ ಹುಣಶ್ಯಾಳದ ಕೈವಲ್ಯಾಶ್ರಮದ  ನಿಜಗುಣ ಶ್ರೀಗಳು, ಹುಕ್ಕೇರಿಯ ಹೀರೇಮಠದ  ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು , ವಿಜಯಪುರದ ಶಿವಪುತ್ರಪ್ಪ ಸ್ವಾಮೀಜಿ, ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯ ಮುಕ್ತಿಮಠದ ಶ್ರೀಗಳು ಸೇರಿ ಹಲವಾರು ಆಧ್ಯಾತ್ಮಿಕ ಚಿಂತಕರನ್ನು ಒಳಗೊಂಡ ಬೃಹತ್ ಜ್ಞಾನಯಜ್ಞ ಹಾಗೂ ಸತ್ಸಂಗ ಸಮಾವೇಶ ನಡೆಸಲಾಗುತ್ತಿದೆ , ಸ್ಥಗಿತಗೊಂಡಿದ್ದ ಜಡಿಸಿದ್ದೇಶ್ವರ ಮಹಾರಾಜರ ಪುಣ್ಯತಿಥಿ ಆಚರಣೆ ಯನ್ನು 2019 ಮೇ 15 ರಂದು ಗ್ರಾಮಸ್ಥರ ಒತ್ತಾಯದ ಮೇರೆಗೆ ಆಚರಿಸಲು ಆರಂಭಿಸಲಾಗಿದೆ , ಶಂಕರಾನಂದ ಪರಮಹಂಸರು ಪುಣ್ಯತಿಥಿ ಆಚರಣೆ ಯನ್ನು  ಶ್ರಾವಣ ಮಾಸದಲ್ಲಿ ನೆರವೆರಿಸಲಾಗುತ್ತದೆ. ಜಡಿಸಿದ್ದೇಶ್ವರ ಮಹಾರಾಜರ ಪುಣ್ಯತಿಥಿ ಯಲ್ಲಿ ಜಡಿಸಿದ್ದೇಶ್ವರ ಮಹಾರಾಜರ ಪಲ್ಲಕ್ಕಿ ಮೆರವಣಿಗೆಯನ್ನು ಭಜನಾ ವಾದ್ಯಗಳ ಮೂಲಕ ಮನೆಮನೆಗೆ ನೈವೇದ್ಯ ಪಡೆಯುತ್ತಾ  ಗ್ರಾಮದಲ್ಲಿ ಪ್ರದಕ್ಷಿಣೆ ಹಾಕುತ್ತದೆ. ಅಂಬಲಿ ಕೊಡಗಳ ಮೂಲಕ ಮಹಿಳೆಯರು ನೈವೇದ್ಯ ತರುತ್ತಾರೆ. ಹೀಗೆ ಈ ಜಡಿಸಿದ್ದಾಶ್ರಮ ಆಶ್ರಮ ಹಲವಾರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತದೆ.

 ಏಕತೆಯ ಸಂಕೇತ ಮತ್ತು ಕಲಾವಿದರಿಗೆ ಪ್ರೋತ್ಸಾಹ -
                               ಜಡಿಸಿದ್ದೇಶ್ವರ ನಾಟ್ಯ ಸಂಘ ಕೊಡಾ ಮಠ ಸ್ಥಾಪನೆಯಾದಾಗಿನಿಂದ ಇಂದಿನವರೆಗೆ ಪ್ರತಿ ವರ್ಷ ಬೀರದೇವರ ಜಾತ್ರೆ ಸಮಯದಲ್ಲಿ ನಾಟಕ ಪ್ರದರ್ಶನ ನೀಡುತ್ತಾ ಬರುತ್ತಿದೆ. ಈ ನಾಟಕ ಕಂಪನಿು ಗ್ರಾಮಸ್ಥರಲ್ಲಿ ಕಲೆಯ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದೆ. ಈಗಲೂ ಕೂಡಾ ಗ್ರಾಮದ ಮುಖಂಡರಾದ ಡಿ ಟಿ ಪಾಟೀಲ ಕರಗಾಂವ, ಎಸ್ ಆರ್ ಪಾಟೀಲ ಕುಟುಂಬಗಳು ಉಸ್ತುವಾರಿ ಹೊಂದಿ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೆರಿಸುತ್ತಾರೆ. ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸೇರಿ ಹಲವಾರು ಧಾರ್ಮಿಕ, ಜಾತಿ ಸಮುದಾಯಗಳು ಇದ್ದರೂ ಇಲ್ಲಿ ನಾವೆಲ್ಲರೂ ಒಂದು ಎಂಬ ತತ್ವದಡಿ ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಜಗತ್ತಿಗೆ ಒಂದಾಗಿ ಬಾಳಿರಿ ವಿಶ್ವ ಶಾಂತಿ ನೆಲೆಸಿರಿ ಎಂಬ ತತ್ವವನ್ನು ಈ ಕರಗಾಂವದ ಜಡಿಸಿದ್ದಾಶ್ರಮ ಸಾರುತ್ತಾ ಬರುತ್ತಿದೆ.

"ಒಂದಾಗಿ ಬಾಳಿರಿ ವಿಶ್ವ ಶಾಂತಿ ನೆಲೆಸಿರಿ "

  ಭೈರಪ್ಪ ಹಾಲಪ್ಪಗೋಳ ಕರಗಾಂವ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು
ಚಿನ್ನದ ಪದಕ ವಿಜೇತರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ಬೆಳಗಾವಿ 

Thursday, 2 May 2019

ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ, ಆಪ್ತ ಸಲಹೆ ಅವಶ್ಯಕ

ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ, ಆಪ್ತ ಸಲಹೆ ಅವಶ್ಯಕ

ಭಾರತ ಕೃಷಿ ಪ್ರಧಾನ ರಾಷ್ಟ್ರ , ಇಲ್ಲಿ ಬಡತನ, ಅನಕ್ಷರತೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜನರಿಗೆ ಕೃಷಿ ಕಾರ್ಯ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಭಾರತದ ಕೃಷಿ ಮಾನ್ಸೂನ್ ಮಳೆಯೊಂದಿಗೆ ಆಡುವ ಜೂಜಾಟವಾಗಿದೆ. ಒಂದು ಸಲ ವಿಪರೀತ ಮಳೆಯಾಗಿ ಹಾಳಾಗುತ್ತದೆ. ಒಮ್ಮೆ ಸತತ ಹತ್ತು ವರ್ಷಗಳವರೆಗೆ ಬರಗಾಲ  ಹೀಗಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಹಲವಾರು ನೈಸರ್ಗಿಕ ವಿಕೋಪಗಳು, ಮಾನವ ನಿರ್ಮಿತ ವಿಕೋಪಗಳು ಕಾರಣವಾಗುತ್ತವೆ.
                             ಪ್ರಮುಖ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳು ಮತ್ತು ಕೌಟುಂಬಿಕ ಮತ್ತು ಸಾಮಾಜಿಕ ಆರ್ಥಿಕ ಸಮಸ್ಯೆಗಳು ಎಂದರೆ ಬರಗಾಲ, ಪ್ರವಾಹ, ಭೂಕಂಪ, ಚಂಡಮಾರುತ, ಅತಿಯಾದ ಭೂ ಸವಕಳಿ, ಭೂ ಕುಸಿತ, ಬೆಳೆ ಹಾನಿ, ಬೆಲೆ ಕುಸಿತ, ಕೀಟಗಳ ಹಾವಳಿ, ಕೊಳವೆ ಬಾವಿಗಳ ವಿಫಲತೆ, ಅತಿಯಾದ ಸಾಲ, ಅಧಿಕ ಬಡ್ಡಿ, ಸಾಲ ವಸೂಲಿಗೆ ಮನೆಗೆ ಬ್ಯಾಂಕ್ ಅಧಿಕಾರಿಗಳ ಬೇಟಿ, ಮೇವಿನ ಕೊರತೆ, ನೀರಿನ ಸಮಸ್ಯೆ, ಅನಾರೋಗ್ಯ, ಹೆಚ್ಚಿನ ಮನೆಖರ್ಚುಗಳು, ಮಕ್ಕಳ ವಿವಾಹ ಮತ್ತು ಶಿಕ್ಷಣ ಖರ್ಚು, ಕೃಷಿ ಸಲಕರಣೆಗಳ ಕೊರತೆ, ಸಾರಿಗೆ ಸಂಪರ್ಕ ಕೊರತೆ, ಬಡತನ , ಕಡಿಮೆ ಇಳುವರಿ ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಸರಮಾಲೆಯೇ ಕಂಡು ಬರುತ್ತದೆ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗಿ ಬೇರೆ ಉದ್ಯೋಗದಲ್ಲಿ ತೊಡಗಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ದುಡುಕಿನ  ನಿರ್ಧಾರದಿಂದ ಆತ್ಮಹತ್ಯೆ ಯಂತಹ ಪ್ರಯತ್ನಕ್ಕೆ ಕೈ ಹಾಕುತ್ತಾರೆ ಆಗ ರೈತರಿಗೆ ಸಾಂತ್ವನ, ಆಪ್ತ ಸಲಹೆ, ಸೂಕ್ತ ಪರಿಹಾರ, ಮಾರ್ಗದರ್ಶನ ನೀಡುವುದು ಅವಶ್ಯಕವಾಗುತ್ತದೆ.
                   ರೈತರ ಆತ್ಮಹತ್ಯೆ ಪ್ರಕರಣಗಳು ಇತ್ತೀಚೆಗೆ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು. ಕೃಷಿ ಅಧಿಕಾರಿಗಳು ಕ್ಷೇತ್ರ /ರೈತರ ಸ್ಥಳಗಳಿಗೆ ಬೇಟಿ ನೀಡಿ ಸೂಕ್ತ ಸಲಹೆ, ಸಾಂತ್ವನ ನೀಡುವುದು ಅತ್ಯವಶ್ಯಕವಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಅಂತೂ ಸಮಸ್ಯೆಗಳಿಗೆ ಹೇಳಿ ಮಾಡಿಸಿದ  ಪ್ರದೇಶದಂತಿದೆ. ಅಂತಹ ಪ್ರದೇಶಗಳಲ್ಲಿ ರೈತರಿಗೆ ಸೂಕ್ತ ಸಲಹೆಗಳು, ಮಾರ್ಗದರ್ಶನ ನೀಡುವುದು ಅನಿವಾರ್ಯವಾಗಿದೆ.
      ಮೇಲ್ಕಂಡ ಕೃಷಿ ವಿಚಾರಗಳಿಗೆ ಮಾನಸಿಕ ಒತ್ತಡ, ಖಿನ್ನತೆ, ಅಂಜಿಕೆ, ಭಯ, ಅಳು, ಜಿಗುಪ್ಸೆ, ಕೊರಗುವಿಕೆ, ಮರೆಯುವಿಕೆ ಸೇರಿ ಮುಂತಾದ ಮಾನಸಿಕ ಒತ್ತಡಕ್ಕೆ ರೈತರು ಒಳಗಾಗುತ್ತಾರೆ. ಇದರಿಂದ ವಿಚಲಿತರಾಗಿ ಆತ್ಮಹತ್ಯೆ ಯತ್ನ ಮಾಡುವ ಘಟನೆಗಳನ್ನು ಗಮನಿಸಿದ್ದೇವೆ. ಇವುಗಳಿಂದ ಮುಕ್ತಿ ಹೊಂದಲು, ರೈತರು ಮತ್ತೆ  ಕೃಷಿಯಲ್ಲಿ ಸಕ್ರೀಯರಾಗಬೇಕಾದರೆ ಅವರಿಗೆ ಮಾನಸಿಕ ಬೆಂಬಲದ ಅವಶ್ಯಕತೆ ಇರುತ್ತದೆ . ಅವರ ಭಾವನೆಗಳಿಗೆ ಸ್ಪಂದಿಸುವ ಕಾರ್ಯ ನಡೆಯಬೇಕಿದೆ. ರೈತರು ಸೂಕ್ತ ಸಲಹೆಯ ಕಾತರದಲ್ಲಿರುತ್ತಾರೆ ಆಗ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದಾಗ ಅವರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಕೃಷಿಯಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕೆಲಸಗಳಾಗಬೇಕು.
              ಕಷ್ಟ ಪಟ್ಟು ಸಾಲ ಮಾಡಿ ಬೆಳೆದ ಬೆಳೆ ಅತಿಯಾದ ಮಳೆ, ಬರಗಾಲ ಸೇರಿ ನೈಸರ್ಗಿಕ ವಿಕೋಪಗಳಿಂದ ಹಾನಿಯಾದಾಗ ಆಗ ರೈತರಿಗೆ ಜಗತ್ತೇ ಕಳಚಿ ಬಿದ್ದಂತಾಗುತ್ತದೆ. ಹಾಗೂ ಸಾಲ ಮಾಡಿ ಕೊಳವೆ ಬಾವಿ ಕೊರೆಯುವಾಗ ನೀರು ದೊರೆಯದಿದ್ದರೆ ರೈತರು ಮಾನಸಿಕ ಕಾಯಿಲೆಯಿಂದ ಬಳಲುವ ಲಕ್ಷಣಗಳು ಕಂಡು ಬಂದಾಗ ಕೃಷಿ ಅಧಿಕಾರಿಗಳು ಮಾತ್ರ ಸಾಂತ್ವನ, ಸಲಹೆ ಹೇಳದೇ ನೆರೆಹೊರೆಯ ಜನರು ಕೂಡಾ ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳಿ ಅವರಿಗೆ ಮಾನಸಿಕ ಬೆಂಬಲ ನೀಡುವುದು ಎಲ್ಲರ ಕರ್ತವ್ಯವೂ ಆಗಿದೆ.


ಆಪ್ತಸಮಾಲೋಚನೆ/ಕೃಷಿ ಸಲಹೆ ಎಲ್ಲಿ ಲಭ್ಯ?
-ರೈತ ಸಂಪರ್ಕ ಕೇಂದ್ರ
-ಕೃಷಿ ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳು
-ಕೃಷಿ ಸಂಬಂಧಿತ ಸರ್ಕಾರೇತರ ಸಂಸ್ಥೆಗಳು
-ಮನೋ ವೈದ್ಯರು
-ವೈದ್ಯಕೀಯ ಸಮಾಜ ಕಾರ್ಯಕರ್ತರು
-ಸಮಾಜಕಾರ್ಯಕರ್ತರು
-ಮಾನಸಿಕ ತಜ್ಞರು
-ಕೃಷಿ ಮತ್ತು ತೋಟಗಾರಿಕೆ ಇಲಾಖೆ
-ಪ್ರಗತಿಪರ ರೈತರು
-ಕೃಷಿ ವಿಷಯಗಳ ತಜ್ಞರು ಮತ್ತು ಉಪನ್ಯಾಸಕರು
-ರೈತ ನಾಯಕರು
 ಮುಂತಾದ ಕಡೆ


ಆಪ್ತ ಸಮಾಲೋಚನೆಯಲ್ಲಿ ಚರ್ಚಿಸಬಹುದಾದ ವಿಷಯಗಳು
-ಲಾಭದಾಯಕ ಬೆಳೆ ಬೆಳೆಯುವ ಕುರಿತು ಮಾರ್ಗದರ್ಶನ
-ಕೃಷಿ ಕ್ಷೇತ್ರದಲ್ಲಿನ ನಷ್ಟ ಪರಿಹಾರ ಪಡೆಯುವ ಕುರಿತು
-ವಿಕೋಪ ನಿರ್ವಹಣೆ ಮತ್ತು ಸೂಕ್ತ ಪರಿಹಾರ ಕುರಿತು ಸಲಹೆ
-ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳ ಬಗ್ಗೆ
-ಉತ್ತಮ ಕೃಷಿ ನಿರ್ವಹಣೆಗೆ ಸಲಹೆಗಳು
-ಮಾನಸಿಕ ಒತ್ತಡ, ಖಿನ್ನತೆ ನಿವಾರಣೆ
-ವೈಜ್ಞಾನಿಕ ಕೃಷಿ ಸಲಕರಣೆಗಳು
-ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಲಹೆ
-ಕೃಷಿಯೊಂದಿಗೆ ಕುಟುಂಬ ನಿರ್ವಹಣೆ
-ಹಣಕಾಸಿನ ನಿರ್ವಹಣೆ
-ಅಲ್ಪಾವಧಿ ಬೆಳೆ ಮತ್ತು ಲಾಭದ ಬೆಳೆಗಳ ಕುರಿತು
-ಕೃಷಿ ಯೊಂದಿಗೆ ಉಪಕಸಬುಗಳ ನಿರ್ವಹಣೆ
-ಪರಿಹಾರ
-ಮಣ್ಣು ಪರೀಕ್ಷೆ
-ಹನಿ ನೀರಾವರಿ ಮತ್ತು ತುಂತುರು ನೀರಾವರಿ ಸೌಲಭ್ಯ
-ಸೂಕ್ತ ಮಾನಸಿಕ ಬೆಂಬಲ
-ಕೃಷಿ, ಕೌಟುಂಬಿಕ ಸಮಸ್ಯೆಗಳು ಮತ್ತು ಪರಿಹಾರಗಳು
ಮುಂತಾದವು



ರೈತರಿಗೆ ಸಾಂತ್ವನ /ಆಪ್ತಸಲಹೆಯ ಅವಶ್ಯಕತೆಗಳು
1)ಕೃಷಿ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡುತ್ತದೆ.
2)ಕೃಷಿ ಕಾರ್ಯದಲ್ಲಿ ಉತ್ಸಾಹದಿಂದ ಮುಂದುವರೆಯಲು
3)ಮನೋ ಸಾಮಾಜಿಕ ಬೆಂಬಲ ನೀಡುತ್ತದೆ
4)ಒತ್ತಡ, ಖಿನ್ನತೆ ಸೇರಿ ಮಾನಸಿಕ ಸಮಸ್ಯೆಗಳಿಂದ ಮುಕ್ತವಾಗಲು
5)ಕೃಷಿಯಲ್ಲಿ ಸುಧಾರಣೆ ತರಲು ಸೂಕ್ತ ಸಲಹೆಗಳನ್ನು ಪಡೆಯಲು
6)ಹೊಸ ತಂತ್ರಜ್ಞಾನ, ಕೃಷಿ ಸಲಕರಣೆಗಳ ಬಗ್ಗೆ ವಿಶೇಷ ಜ್ಞಾನ ಪಡೆದುಕೊಳ್ಳಲು
7)ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆಯಲು ಸಹಾಯಕ.
8)ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯಕ
9)ಕೃಷಿಯೊಂದಿಗೆ ಕೌಟುಂಬಿಕ ನಿರ್ವಹಣೆ  ಮಾಡಲೂ ಸಲಹೆ
10)ರೈತರ ಮನೋ ಸ್ಥೈರ್ಯ ಹೆಚ್ಚಿಸಲು ಸಹಾಯಕ
ಮುಂತಾದವು.

ಸಂದಿಗ್ಧ ಪರಿಸ್ಥಿತಿಯಲ್ಲಿರುವ ರೈತರಿಗೆ ಇಂದಿನ ಆಧುನಿಕ ದಿನಮಾನಗಳಲ್ಲಿ ಸಾಂತ್ವನ, ಸಲಹೆ, ಆಪ್ತ ಸಮಾಲೋಚನೆಯ ಅವಶ್ಯಕತೆ ಇದ್ದು ರೈತರು ಸೂಕ್ತ ಸಲಹೆ ಪಡೆದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿ, ಕೃಷಿ ಇಲಾಖೆ ಕೂಡಾ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತ ಸ್ನೇಹಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದರೆ ರೈತರ ಕಲ್ಯಾಣ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ, ಕೃಷಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ , ಮಾನಸಿಕ ಆಸ್ಪತ್ರೆಗಳಲ್ಲಿ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ರೈತರಿಗೆ ಮಾನಸಿಕ ಬೆಂಬಲ ನೀಡಲು ಮುಂದಾಗಬೇಕಾಗಿದೆ. ಅನ್ನ ನೀಡುವ ರೈತನಿಗೆ ಸಮಸ್ಯೆ ಆದರೆ ಅದು ಇಡೀ ಮಾನವ ಸಮುದಾಯಕ್ಕೆ ಸಮಸ್ಯೆ ಇದ್ದಂತೆ ಎಲ್ಲ ರೈತರೂ ಕೂಡಾ ಸುಖದಿಂದ ಬಾಳಲಿ ಎನ್ನುವುದೇ ನನ್ನ ಆಶಯ.



ಭೈರಪ್ಪ ಹಾಲಪ್ಪಗೋಳ ಕರಗಾಂವ. ತಾ. ಚಿಕ್ಕೋಡಿ ಜಿ. ಬೆಳಗಾವಿ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು ಚಿನ್ನದ ಪದಕ ವಿಜೇತರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ 

Tuesday, 30 April 2019

ಎಸ್ ಎಸ್ ಎಲ್ ಸಿ, ಪಿಯುಸಿ ನಂತರ ಮುಂದೇನು? ,ಕಲಾ, ಸಮಾಜ ವಿಜ್ಞಾನ, ಮಾನವೀಯ ಶಾಸ್ತ್ರಗಳ ಬೇಡಿಕೆ ಹೆಚ್ಚಳ

ಕಲಾ, ಸಮಾಜ ವಿಜ್ಞಾನ, ಮಾನವೀಯ ಶಾಸ್ತ್ರಗಳ ಬೇಡಿಕೆ ಹೆಚ್ಚಳ

ಕಲಾ ವಿಭಾಗ, ಸಮಾಜ ವಿಜ್ಞಾನ ಎಂದ ತಕ್ಷಣ ಸಾಕಷ್ಟು ಜನರು ಮೂಗು ಮುರಿಯುವರೆ ಹೆಚ್ಚು. ವಿದ್ಯಾರ್ಥಿಗಳು ಬೇರೆ ಬೇರೆ ವಿಭಾಗದ ಬಗ್ಗೆ ಕೀಳರಿಮೆ ಹೊಂದುತ್ತಾರೆ. ಎಸ್ ಎಸ್ ಎಲ್ ಸಿ ವರೆಗೆ ಕೂಡಿ ಕಲಿತ ವಿದ್ಯಾರ್ಥಿಗಳು ಕಲಾ ವಿಜ್ಞಾನ ವಾಣಿಜ್ಯ ಅಂಥ ಬೇರ್ಪಡೆಯಾಗಿ  ಅವರ ಮದ್ಯೆ ಇರುವ ಸ್ನೇಹ ಬೆಳಸೋಕೆ ಕೂಡಾ  ಹಿಂದೂ ಮುಂದೆ ನೋಡುತ್ತಾರೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶ ಬಂದ ನಂತರ ಯಾವ ಕೋರ್ಸಗೆ ಸೇರಬೇಕು ಅನ್ನುವುದು ದೊಡ್ಡ ಪ್ರಶ್ನೆ ಮೂಡುವುದು  ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸರ್ವೆ ಸಾಮಾನ್ಯ . ಎಲ್ಲರಿಗೂ ಮೊದಲಿನಿಂದಲೂ ಗೊತ್ತಿರುವ ಕೋರ್ಸ್ ಎಂದರೆ ಸಾಮಾನ್ಯ ಬಿ ಎ ಅದರಲ್ಲೂ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ ವಿಷಯಗಳು ಬಿಟ್ಟರೆ ಬಾಷಾ ವಿಷಯಗಳು, ಇನ್ನು ಬಿಕಾಂ, ಬಿ ಎಸ್ ಸಿ. ಇನ್ನೂ ಇಂದಿನ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ, ತೋಟಗಾರಿಕೆ ಕೋರ್ಸಗಳೆ ಇಷ್ಟ.
                     
        ಮಕ್ಕಳಿಗೆ ಕಲಿಯುವ ವಿಷಯದ ಮೇಲೆ ಆಸಕ್ತಿ ಇರದೆ ಇದ್ದರೂ ನನ್ನ ಮಗ ಇಂಜನಿಯರಿಂಗ್ ಕಲಿಯಬೇಕು,ಡಾಕ್ಟರ್  ಪದವಿ ಬೇಕು ಎಂಬ ಆಶೆ. ಎಷ್ಟೇ ದುಡ್ಡು ಪಡೆದರೂ ಪರವಾಗಿಲ್ಲ ಎಲ್ಲರೂ ವಿಜ್ಞಾನದಂತಹ ಕೋರ್ಸಗಳನ್ನು ಪಡೆಯುತ್ತಿದ್ದಾರೆ ನನ್ನ ಮಗನಿಗೆ ಅದನೇ ಕಲಿಸುತ್ತೇನೆ ಎಂಬ ಹಠಕ್ಕೆ ಬಿಳ್ಳುತ್ತಾರೆ. ಆ ಮಗುವಿಗೆ ಯಾವ ವಿಷಯದ ಮೇಲೆ ಹೆಚ್ಚಿನ ಆಸಕ್ತಿ ಇದೆ ಎಂದು ನೋಡದೇ ಒತ್ತಾಯದ ಕಲಿಕೆಗೆ ಹಾಕಿದಾಗ ಮಕ್ಕಳಿಗೆ  ಅಂಜಿಕೆ ಭಯ ಒತ್ತಡ ಕಾಣುತ್ತದೆ. ಮಕ್ಕಳು ವಿಷಯದ ಮೇಲೆ ಹಿಡಿತ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ, ಕಡಿಮೆ ಫಲಿತಾಂಶ, ಅನುತ್ತೀರ್ಣ ಆಗುವ ಸಂಭವ ಇರುತ್ತದೆ. ಮಕ್ಕಳ ಆಸಕ್ತಿ ವಿಷಯಕ್ಕೆ ತಕ್ಕಂತೆ ಓದಲು ಸ್ವಾತಂತ್ರ್ಯ ನೀಡಬೇಕು ಇನ್ನೂ ಕೆಲವರು ಮಕ್ಕಳು ಗಳಿಕೆಗೆ ಸಂಬಂಧಿಸಿದಂತ ಕೋರ್ಸ್ಗಳನ್ನು ಆಯ್ಕೆಮಾಡಿಕೋಳ್ಳುತಾರೆ. ಆದರೆ ಆ ಮಗುವಿಗೆ ಸಾಮಾಜಿಕ ಪ್ರಜ್ಞೆ ಅನುಭವವೇ ಇರುವುದಿಲ್ಲ. ಸಮಾಜ ವಿಜ್ಞಾನ ಕೋರ್ಸಗಳು ಗಳಿಕೆಯೊಂದಿಗೆ ಸಾಮಾಜಿಕ ಬೆರೆಯುವಿಕೆಯನ್ನು ಕಲಿಸಿ ಕೊಡುತ್ತದೆ. ಸಮಾಜ ವಿಜ್ಞಾನ ಮತ್ತು ಮಾನವೀಯ ವಿಜ್ಞಾನ ವಿಷಯಗಳನ್ನು ಕಲಿಯುವಾಗ ಸಂತೋಷಕ್ಕೆ ಮಿತಿಯೆ ಇಲ್ಲ.
                   ಕೆಲ ವಿದ್ಯಾರ್ಥಿಗಳು ಸಾಮಾಜಿಕ ಮತ್ತು ಮಾನವೀಯ, ಭಾಷಾ ವಿಷಯಗಳ ಮೇಲೆ ಆಸಕ್ತಿ ಹೊಂದಿರುತ್ತಾರೆ. ಅವರನ್ನು ಒತ್ತಾಯದಿಂದ ತಾಂತ್ರಿಕ, ವಿಜ್ಞಾನ ವಿಷಯಕ್ಕೆ ಸೇರಿಸಿದರೆ ಆ ಮಗು ಪಡಬಾರದ ಕಷ್ಟ ಪಡಬೇಕಾಗುತ್ತದೆ. ಇನ್ನೂ ವಿಜ್ಞಾನ ಮತ್ತು ತಂತ್ರಜ್ಞಾನ ದ ಆಸಕ್ತಿ ಮಗುವಿಗೆ ಕಲಾ ವಿಭಾಗದ ವಿಷಯ ನೀಡಿದರೆ  ತೀರಾ ಕಷ್ಟ ಪಡಬೇಕಾಗುತ್ತದೆ.ಕೆಲವರು ಫಲಿತಾಂಶ ನೋಡಿ ಕೋರ್ಸ್ ಆಯ್ಕೆ ಮಾಡಿರುತ್ತಾರೆ. 85 ಕ್ಕಿಂತ ಹೆಚ್ಚಾದರೆ ವಿಜ್ಞಾನ, 70 ಕ್ಕಿಂತ ಹೆಚ್ಚಿನ ಅಂಕ ಪಡೆದರೇ ವಾಣಿಜ್ಯ ವಿಭಾಗ, ಇನ್ನು 70 ಕ್ಕಿಂತ ಕಡಿಮೆ ಅಂಕ ಪಡೆದವರು ಕಲಾ ವಿಭಾಗ ಎನ್ನುವ ನಂಬಿಕೆ ಇತ್ತು ಆದರೆ ಅದು ಇಂದಿಲ್ಲ. ಫಲಿತಾಂಶದಲ್ಲಿ ಏನೂ ಬೇಕಾದರೂ ಆಗಬಹುದು, ಗಳಿಸಿದ ಅಂಕಗಳಿಗೆ ಆಯ್ದುಕೊಳ್ಳುವ ವಿಷಯಗಳಿಗೆ  ಯಾವುದೇ ಸಂಬಂಧವಿಲ್ಲ ಜಸ್ಟ್ ಪಾಸಾದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಓದಬಹುದು, ರಾಜ್ಯಕ್ಕೆ ಟಾಪರ್ ಆದವರೂ ಕಲಾ ವಿಭಾಗ ಆಯ್ದಕೊಳ್ಳಬಹುದು.


ವಿದ್ಯಾರ್ಥಿಗಳು ಹೇಗೆ ತಮ್ಮ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು?
1)ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣಕ್ಕೆ ಕೋರ್ಸಗಳನ್ನೂ ಆಯ್ದುಕೊಳ್ಳುವಾಗ ತಮ್ಮ ಆಸಕ್ತಿವುಳ್ಳ ವಿಷಯ ಆಯ್ದಕೊಳ್ಳಬೇಕು.
2)ಪಾಲಕರು ಮಕ್ಕಳ ಆಯ್ಕೆಗೆ ಅವಕಾಶ ನೀಡಬೇಕು
3)ಸ್ನೇಹಿತರು ಆಯ್ದುಕೊಳ್ಳುವ ವಿಷಯ ಆಯ್ಕೆ ಮಾಡಬಾರದು
4)ಯಾವ ಕೋರ್ಸ್ ಹೆಚ್ಚು ಅಲ್ಲ, ಯಾವುದು ಕಡಿಮೆ ಅಲ್ಲ ತನ್ನದೇ ಆದ ವಿಶೇಷತೆ ಜ್ಞಾನದ ಸಾಮರ್ಥ್ಯ ಎಲ್ಲ ಕೋರ್ಸ್ಗಳಿಗೂ ಇದೆ.
5)ಫಲಿತಾಂಶ ನೋಡಿ ವಿಜ್ಞಾನ, ವಾಣಿಜ್ಯ ಕಲೆ ಎಂದು ಕ್ರಮವಾಗಿ ಆಯ್ದಕೊಳ್ಳಬೇಡಿ, ಯಾರುಬೇಕಾದರೂ ತಮಗೆ ಇಷ್ಟವಾದ ವಿಭಾಗ ಆಯ್ದಕೊಳ್ಳಬಹುದು.
6)ಹೆಚ್ಚಿನ ಸಲಹೆಗೆ ಆಪ್ತ ಸಮಾಲೋಚಕರು, ಶಿಕ್ಷಣ ತಜ್ಞರ ಸಲಹೆ ಪಡೆಯಬಹುದು
7)ಭವಿಷ್ಯದ ಉದ್ಯೋಗ, ಸಾಧಿಸಬಹುದಾದ  ಫಲಿತಾಂಶಗಳ ಊಹೆಯ ಮೂಲಕ ಕೋರ್ಸಗಳನ್ನೂ ಆಯ್ದುಕೊಳ್ಳಿ.
8)ಹಿಂದಿನ ತರಗತಿಗಳಲ್ಲಿ ಅಚ್ಚುಮೆಚ್ಚಿನ ವಿಷಯಗಳ ಆಯ್ಕೆಗೆ ಒತ್ತುಕೊಡಿ ಅವುಗಳ ಅಂಕಗಳ ಮೇಲೆ ಆಯ್ಕೆ ಬೇಡ. ಏಕೆಂದರೆ ಗಳಿಸಿದ  ಅಂಕಗಳಲ್ಲಿ ವ್ಯತ್ಯಾಸ ಆಗಿರಬಹುದು.
9)ಕಲಾ ವಿಷಯಗಳಲ್ಲಿ ಹೆಚ್ಚಿನ ಬರವಣಿಗೆ, ವಿಶ್ಲೇಷಣೆಯ ಅವಶ್ಯಕತೆ ಇರುತ್ತದೆ, ವಿಜ್ಞಾನ, ವಾಣಿಜ್ಯ ವಿಷಯಗಳಲ್ಲಿ ನಿಕರತೆ, ವಸ್ತುನಿಷ್ಠತೆ, ಕಡಿಮೆ ಬರವಣಿಗೆ ಇರುತ್ತದೆ ಆಯ್ಕೆ ಮಾಡುವಾಗ ಯೋಚಿಸಿ ಆಯ್ಕೆ ಮಾಡಬೇಕು.
10)ಕಲಾ ವಿಭಾಗದಲ್ಲಿ ಫಲಿತಾಂಶ ಗರಿಷ್ಠತೆ ಕಡಿಮೆ ಇರುತ್ತದೆ, ವಾಣಿಜ್ಯ ವಿಜ್ಞಾನ ವಿಭಾಗದಲ್ಲಿ ಫಲಿತಾಂಶ ಹೆಚ್ಚಳ ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ.

   
   ಕಲಾ ವಿಭಾಗ-     
       ಮಾನವೀಯ, ಸಮಾಜ ವಿಜ್ಞಾನ ವಿಷಯಗಳನ್ನು ಓದುವುದು ಎಷ್ಟೋಂದು ಸಂತೋಷ. ಮಾನವೀಯ, ಸಮಾಜ ವಿಜ್ಞಾನ, ಕಲಾ ವಿಭಾಗದ ವಿದ್ಯಾರ್ಥಿಗಳು ಸಾಮಾಜಿಕವಾಗಿ ಬರೆಯುತ್ತಾರೆ. ಸಮಾಜದಲ್ಲಿ ಹೇಗೆ ಬಾಳಬೇಕು, ಯಾವ ವ್ಯಕ್ತಿಯ ಜೋತೆ ಹೇಗಿರಬೇಕು ಎನ್ನುವ ವಿಷಯಗಳನ್ನು ಇಲ್ಲಿ ಕಲಿಯಲಾಗುತ್ತದೆ. ಹೆಸರೆ ಹೇಳುವಂತೆ ಮಾನವೀಯ ಶಾಸ್ತ್ರ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು, ಗುಣಗಳನ್ನು ಬೆಳಸಿಕೊಂಡಿರುತ್ತಾರೆ. ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ ಎರಡೂ ಭಾಷಾ ವಿಷಯಗಳು ಅದರೊಂದಿಗೆ  ನಾಲ್ಕು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.ಆಯ್ಕೆ ಮಾಡಿಕೊಳ್ಳುವ ಸಮಯದಲ್ಲಿ ಆಸಕ್ತಿ ವಿಷಯಗಳನ್ನು ಆಯ್ದಕೊಳ್ಳಬೇಕು. ಪ್ರಮುಖ ಸಮಾಜ ವಿಜ್ಞಾನ ವಿಷಯಗಳೆಂದರೆ ಇತಿಹಾಸ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ ಶಿಕ್ಷಣಶಾಸ್ತ್ರ, ಭೂಗೋಳಶಾಸ್ತ್ರ, ತತ್ವಶಾಸ್ತ್ರ ಮುಂತಾದವು.


ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಲಾ ವಿಷಯಗೆ ನಂ 1
ಹೆಚ್ಚಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಲಾ ವಿಭಾಗದ ವಿಷಯಗಳು  ಟಾಪ್ ನಂ 01 ನಲ್ಲಿರುತ್ತವೆ. ಎಷ್ಟೇ ದೊಡ್ಡ ದೊಡ್ಡ ಕೋರ್ಸ್ಗಳನ್ನು ಓದಿದವರೂ ಕೂಡಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದರೆ ಸಮಾಜ ವಿಜ್ಞಾನ ಅಥವಾ ಮಾನವೀಯ ವಿಷಯಗಳನ್ನು ಓದಲೇಬೇಕು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡರು ಅದರಲ್ಲಿ 80% ಕಲಾ ವಿಭಾಗದ ವಿಷಯದ ಪ್ರಶ್ನೆಗಳೆ ಇರುತ್ತವೆ.

ಐಎಎಸ್ /ಕೆಎಎಸ್ ನಲ್ಲಿ ಕಲಾ, ಸಮಾಜ ವಿಜ್ಞಾನ, ಮಾನವೀಯ ವಿಜ್ಞಾನ ವಿಷಯಗಳೆ ಫೇವರಿಟ್

                  ಹಿಂದೆ ಐ ಎ ಎಸ್ ಮತ್ತು ಕೆ ಎ ಎಸ್ ಪರೀಕ್ಷೆಯಲ್ಲಿ ಐಚ್ಛಿಕ ವಿಷಯಗಳ ಆಯ್ಕೆ ಮಾಡಿಕೊಳ್ಳುವಾಗ ಪದವಿ ಪಡೆದ ವಿಷಯಗಳಲ್ಲಯಯೇ  ಐಎಎಸ್ ಕೆಎಎಸ್ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಉದಾಹರಣೆ ಇಂಜನಿಯರಿಂಗ್ ಪದವಿ ಪಡೆದವರು ಇಂಜನಿಯರಿಂಗ್ ವಿಷಯ, ವೈದ್ಯಕೀಯ ಪದವಿ ಪಡೆದವರು ವೈದ್ಯಕೀಯ ವಿಷಯ, ವಿಜ್ಞಾನ ಪದವಿ ಪಡೆದವರು ವಿಜ್ಞಾನ ವಿಷಯ, ಕಲಾ ಪದವಿ ಪಡೆದವರು ಕಲಾ ವಿಷಯಗಳಲ್ಲಿ ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳುತ್ತಿದ್ದರು. ಆದರೆ ಇಂದು ಇಂಜಿನಿಯರಿಂಗ್, ವೈದ್ಯಕೀಯ, ವಿಜ್ಞಾನ, ವಾಣಿಜ್ಯ ಪದವಿ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ಕಲಾ, ಮಾನವೀಯ ಶಾಸ್ತ್ರಗಳು, ಸಮಾಜ ವಿಜ್ಞಾನ ವಿಷಯಗಳನ್ನು ಆಯ್ದುಕೊಂಡ ದೇಶದ ಅತ್ಯುನ್ನತ ಪರೀಕ್ಷೆಗಳಾದ ಐಎಎಸ್ ಐಪಿಎಸ್ ಮತ್ತು ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗುತ್ತಿದ್ದಾರೆ. ಇತಿಹಾಸ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ , ಭೂಗೋಳಶಾಸ್ತ್ರ, ತತ್ವಶಾಸ್ತ್ರ ಮಾನವಶಾಸ್ತ್ರ ಅಪರಾಧ ಶಾಸ್ತ್ರ, ಗ್ರಾಮೀಣ ಅಭಿವೃದ್ಧಿ, ಸಹಕಾರ, ಸಾರ್ವಜನಿಕ ಆಡಳಿತ ಸೇರಿ ಪ್ರಮುಖ ವಿಷಯಗಳನ್ನು ಆಯ್ದುಕೊಂಡು  ಪಾಸಾದ ಉದಾಹರಣೆಗಳು ಸಾಕಷ್ಟಿವೆ. ಹಲವಾರು ಐಎಎಸ್ ಆಪಿಸರ್ ಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ವಿಜ್ಞಾನ ಸೇರಿ ಪ್ರಮುಖ ಕೋರ್ಸ್ ಗಳನ್ನು ಮೊಟಕುಗೊಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಕಲಾ ವಿಭಾಗ ಸೇರಿದ ಉದಾಹರಣೆಗಳು ಸಾಕಷ್ಟಿವೆ.


ಉದ್ಯೋಗದಲ್ಲಿ ನಂ 01
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿಷಯಗಳಲ್ಲಿ  ಸಾಮಾನ್ಯವಾಗಿ ಮೂರು ಭಾಷಾ ವಿಷಯಗಳು (ಕನ್ನಡ ಇಂಗ್ಲಿಷ್ ಹಿಂದಿ) ಮತ್ತು ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ವಿಷಯಗಳು. ಇವುಗಳಲ್ಲಿ ಮೂರು ಭಾಷಾ ವಿಷಯಗೂ ಮತ್ತು ಸಮಾಜ ವಿಜ್ಞಾನ ಸೇರಿ ಒಟ್ಟು ಆರು ವಿಷಯಗಳಲ್ಲಿ ನಾಲ್ಕು ವಿಷಯಗಳ ಭೋದನೆಗೆ ಕಲಾ ವಿಭಾಗದ ವಿದ್ಯಾರ್ಥಿಗಳೆ ಬೇಕು. ಹೀಗಾಗಿ ಅತಿ ದೊಡ್ಡ ಉದ್ಯೋಗ ವ್ಯವಸ್ಥೆಯಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ 80% ಶಿಕ್ಷಕರು ಕಲಾ ಶಾಕ್ಟಕರೇ ಆಗಿರುತ್ತಾರೆ. ಪದವಿ ಪೂರ್ವ, ಪದವಿ ಸ್ನಾತಕೋತ್ತರ ವಿಷಯಗಳಲ್ಲಿ ಕಲಾವಿಭಾಗದ ವಿಷಯಗಳೆ ಹೆಚ್ಚಿರುವುದರಿಂದ  ಕಲಾ ವಿಭಾಗದ ಉದ್ಯೋಗಿಗಳ ಪ್ರಮಾಣ ಹೆಚ್ಚಾಗಿದೆ.

ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ ನಂತರ
ಕಲಾ ಪದವಿ (ಬಿ ಎ)
ಇತಿಹಾಸ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ ಶಿಕ್ಷಣಶಾಸ್ತ್ರ, ಭೂಗೋಳಶಾಸ್ತ್ರ, ತತ್ವಶಾಸ್ತ್ರ ಮಾನವಶಾಸ್ತ್ರ ಅಪರಾಧ ಶಾಸ್ತ್ರ ಸೇರಿ ಪ್ರಮುಖ ವಿಷಯಗಳಲ್ಲಿ ಪದವಿ ಶಿಕ್ಷಣ ಪೊರೈಸಬಹುದು. ಇಲ್ಲಿ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಮೂರು ವಿಷಯಗಳನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳಬೇಕಾಗುತ್ತದೆ.

ಕಲಾ ಸ್ನಾತಕೋತ್ತರ ಪದವಿ (ಎಂ ಎ)
ಸ್ನಾತಕೋತ್ತರ ಶಿಕ್ಷಣವನ್ನು ಇತಿಹಾಸ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ ಶಿಕ್ಷಣಶಾಸ್ತ್ರ, ಭೂಗೋಳಶಾಸ್ತ್ರ, ತತ್ವಶಾಸ್ತ್ರ ಮಾನವಶಾಸ್ತ್ರ ಅಪರಾಧ ಶಾಸ್ತ್ರ, ಗ್ರಾಮೀಣ ಅಭಿವೃದ್ಧಿ, ಸಹಕಾರ, ಸಾರ್ವಜನಿಕ ಆಡಳಿತ ಸೇರಿ ಪ್ರಮುಖ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಅಧ್ಯಯನ ಮಾಡಬೇಕಾಗುತ್ತದೆ. ಇದು ಪದವಿ ನಂತರ ಎರಡು ವರ್ಷಗಳ ಕೋರ್ಸ್ ಆಗಿದೆ.

ಡಾಕ್ಟರೇಟ್ ಶಿಕ್ಷಣ (ಪಿ ಹೆಚ್ ಡಿ)
ಸ್ನಾತಕೋತ್ತರ ಶಿಕ್ಷಣ ಪೊರೈಸಿದ ವಿಷಯಗಳಲ್ಲಿ ಮಾರ್ಗದರ್ಶಕರ ಸಹಾಯದಿಂದ ಒಂದು ವಿಷಯದ ಮೇಲೆ ಆಳವಾದ ಅಧ್ಯಯನ ಮಾಡಬೇಕಾಗುತ್ತದೆ. ಇದು ಮೂರುವರೆ ವರ್ಷಗಳ ಕೋರ್ಸ್ ಆಗಿದೆ.

ಕಲಾ ಮತ್ತು ವಿಜ್ಞಾನ ವಿಷಯಗಳ ಸಮ್ಮಿಶ್ರಣ ಕೋರ್ಸಗಳು

ಸಮಾಜ ಕಾರ್ಯ ಪದವಿ- ಸಮಾಜ ಕಾರ್ಯವು ಒಂದು ಇತ್ತಿಚಿನ ಜ್ಞಾನದ ಶಾಖೆಯಾಗಿದೆ. ಇದು ಒಂದು ಕಲೆ ಮತ್ತು ವಿಜ್ಞಾನದ ಸಮ್ಮಿಶ್ರಣವಾಗಿದೆ. ಇದು ವ್ಯಕ್ತಿ ಗುಂಪು ಸಮುದಾಯದ ಮನೋಸಾಮಾಜಿಕ ಸಮಸ್ಯೆಗಳಿಗೆ ವೈಜ್ಞಾನಿಕ ತಳಹದಿಯ ಮೂಲಕ ಸೂಕ್ತ ಪರಿಹಾರವನ್ನು ನೀಡುತ್ತದೆ. ಇದು ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಮಾನವಶಾಸ್ತ್ರ, ಅಪರಾಧ ಶಾಸ್ತ್ರ,, ತತ್ವಶಾಸ್ತ್ರ, ಪರಿಸರ ಅಧ್ಯಯನ, ಮನಃಶಾಸ್ತ್ರ, ನಿರ್ವಹಣೆ ವಿಷಯಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ.
ಇಲ್ಲಿ ಥಿಯರಿ ವಿಷಯಗಳನ್ನು ವರ್ಗಗಳಲ್ಲಿ ಕಲಿತು ಸಮುದಾಯದಲ್ಲಿ ಮಾನವೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಕ್ಷೇತ್ರ ಭೇಟಿ, ಶಾಲಾ ಸಮಾಜಕಾರ್ಯ, ಕ್ಷೇತ್ರ ಕಾರ್ಯ, ಸಮಾಜ ಕಾರ್ಯ ಶಿಬಿರ, ವಿಶೇಷ ಸಾಧಕರ ಮತ್ತು ಸಮಸ್ಯೆ ಪೀಡಿತ ವ್ಯಕ್ತಿಗಳ ಕೇಸ್ ಸ್ಟಡಿ, ವರ್ಗದಲ್ಲಿ ಪ್ರಾಯೋಗಿಕ ಆಟಗಳು, ಸಂಶೋಧನೆ ಸೇರಿ ಹಲವಾರು ಚಟುವಟಿಕೆಗಳಿಗೆ ಅವಕಾಶ ಸಿಗುತ್ತದೆ. ಸಮಾಜಕಾರ್ಯ ಎಂಬುದು ಜನರೊಂದಿಗೆ ವ್ಯವಹರಿಸುವ ವಿಜ್ಞಾನವಾಗಿದೆ. ಇದು ಸಂತೋಷದ ಕಲಿಕೆಗೆ, ನಾಯಕತ್ವ ಬೆಳವಣಿಗೆಗೆ ಸಹಾಯಕವಾಗಿದೆ. ವಿಜ್ಞಾನ ವಿಷಯಗಳಲ್ಲಿ ವಿಜ್ಞಾನದ ವಸ್ತುಗಳೊಂದಿಗೆ ಪ್ರಯೋಗದ ಮೂಲಕ ಅನುಭವ ಪಡೆದರೆ ಇಲ್ಲಿ ಇಡಿ ಸಮಾಜಕಾರ್ಯಕರ್ತರಿಗೆ ಇಡಿ ಸಮುದಾಯೇ ಪ್ರಯೋಗಾಲಯವಾಗಿದೆ.
ಮೂರು ವರ್ಷಗಳ ಬಿ ಎಸ್ ಡಬ್ಲ್ಯೂ ಪದವಿ, ನಂತರ ಎರಡು ವರ್ಷಗಳ ಎಂ ಎಸ್ ಡಬ್ಲ್ಯು ಸ್ನಾತಕೋತ್ತರ ಪದವಿ ಮತ್ತು ಪಿ ಹೆಚ್ ಡಿ ಕಲಿಯಲು ಅವಕಾಶವಿದೆ.
ಅರ್ಹತೆ - ದ್ವಿತೀಯ ಪಿಯುಸಿ ತತ್ಸಮಾನ (ಕಲಾ ವಾಣಿಜ್ಯ ವಿಜ್ಞಾನ  ಜೆಓಸಿ ಡಿಪ್ಲೊಮಾ)
ಭಾರತದಲ್ಲಿ 1936 ರಲ್ಲಿ ಮೊದಲ ಬಾರಿಗೆ ಟಾಟಾಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್  ಎಂಬ ಸಂಸ್ಥೆಯಲ್ಲಿ ಸಮಾಜ ಕಾರ್ಯ ಶಿಕ್ಷಣವನ್ನು ಪ್ರಾರಂಬಿಸಲಾಯಿತು ಮುಂದೆ 1947 ರಲ್ಲಿ ದೆಹಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ಲಕ್ನೋ ಸಮಾಜ ಕಾರ್ಯ ಶಾಲೆ, ವಾರಣಾಸಿಯಲ್ಲಿ ಸಮಾಜ ಕಾರ್ಯ ಶಾಲೆಯನ್ನು ಸ್ಥಾಪಿಸಲಾಯಿತು. ಈಗ ಎಲ್ಲ ರಾಜ್ಯಗಳಲ್ಲಿ ಸಮಾಜ ಕಾರ್ಯ ಪದವಿ, ಸ್ನಾತಕೋತ್ತರ ಪದವಿ, ಪಿ ಹೆಚ್ ಡಿ ಪದವಿಗಳನ್ನು ರಾಜ್ಯ, ಕೇಂದ್ರಿಯ, ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಸಮಾಜ ಕಾರ್ಯದ ಕಲಿಕೆಗೆ ಅವಕಾಶ ಇದೆ. ಇಂದು ಸಮಾಜ ಕಾರ್ಯ ಪದವಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೂ ಇಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆ ಇಲ್ಲ.
            ಸಮಾಜ ಕಾರ್ಯದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ, ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಮಾಜ ಕಾರ್ಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ತಿದ್ದುಪಡಿ ಕ್ಷೇತ್ರದಲ್ಲಿ ಸಮಾಜ ಕಾರ್ಯ ಸೇರಿ ಮುಂತಾದ ವಿಷಯಗಳ ಕಲಿಕೆಗೆ ವಿಶೇಷಿಕರಣ ವ್ಯವಸ್ಥೆ ಕಲ್ಪಿಸಲಾಗಿದೆ.
              ಮಾನವ ಸಂಪನ್ಮೂಲ ವ್ಯವಸ್ಥಾಪಕ, ಕಾರ್ಮಿಕ ಕಲ್ಯಾಣ ಅಧಿಕಾರಿ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಶಾಲಾ ಸಮಾಜ ಕಾರ್ಯಕರ್ತರಾಗಿ, ಆಪ್ತಸಮಾಲೋಚಕರಾಗಿ, ಅಭಿವೃದ್ಧಿ ಅಧಿಕಾರಿ, ಶಿಶು ಅಭಿವೃದ್ಧಿ ಅಧಿಕಾರಿ, ಕ್ಷೇತ್ರ ಅಧಿಕಾರಿ, ಆರೋಗ್ಯ ಶಿಕ್ಷಣಾಧಿಕಾರಿ, ವೈದ್ಯಕೀಯ ಸಮಾಜಕಾರ್ಯಕರ್ತರು, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು, ಮೇಲ್ವೀಚಾರಕರು, ಯೋಜನಾಧಿಕಾರಿ, ವ್ಯವಸ್ಥಾಪಕರು, ಸಾಮಾಜಿಕ ಅಭಿವೃದ್ಧಿ ಅಧಿಕಾರಿ, ಉಪನ್ಯಾಸಕರು, ಕಾರ್ಯಕ್ರಮ ಅಧಿಕಾರಿ ಸೇರಿ ಹಲವಾರು ಹುದ್ದೆಗಳು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಇದೆ. ಇಲ್ಲಿ ಮಹಿಳೆ, ಮಕ್ಕಳು ವೃದ್ಧರು, ಅಂಗವಿಕಲರು, ಅನಾಥರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ, ಕೈದಿಗಳ, ಬಾಲಾಪರಾದಿಗಳ, ಮಾನಸಿಕ ರೋಗಿಗಳ, ರೈತರ ಕಲ್ಯಾಣಕ್ಕೆ  ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಸಮಾಜ ಕಾರ್ಯ ಮನೋಭಾವ ಬೆಳಸಿ ಉತ್ತಮ ಪ್ರಜೆ ಮಾಡುವಲ್ಲಿ ಯಾವುದೇ ಸಂಶಯವಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಮಾನವೀಯ ವಿಷಯಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಎಲ್ಲರೂ ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂಬ ಆಶಯ ನಮ್ಮದು.

ಭೈರಪ್ಪ ಹಾಲಪ್ಪಗೋಳ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು
ಚಿನ್ನದ ಪದಕ ವಿಜೇತರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

Monday, 29 April 2019

ಸಹಕಾರ ರತ್ನ ಡಿ ಟಿ ಪಾಟೀಲ ಕರಗಾಂವ(D. T. Patil karagaon) - ಸಂಕ್ಷಿಪ್ತ ಪರಿಚಯ.Brief Introduction

 ಸಹಕಾರ ರತ್ನ ಡಿ ಟಿ ಪಾಟೀಲ ಕರಗಾಂವ - ಸಂಕ್ಷಿಪ್ತ ಪರಿಚಯ

ಸಹಕಾರ ರತ್ನ, ಬಡವರ ಬಂದು, ರಾಜಕೀಯ ಗುರು, ಹೀಗೆ ಅವರನ್ನು ಕರೆಯಲು ಯಾವ ದೇಶದ ಶಬ್ದಕೋಶ ಬಳಸಿದರೂ ಕಡಿಮೆಯೇ. ನೇರ ನುಡಿ, ಕಡಿಮೆ ಮಾತು, ಹೆಚ್ಚಿನ ಕೆಲಸ, ಬಡವರ ಕಾಳಜಿ, ರೈತರ ಸ್ನೇಹ ಜೀವಿ ಎಂದೇ ಖ್ಯಾತಿಯಾದ ಒಂದು ವ್ಯಕ್ತಿತ್ವ, ವಯಸ್ಸಿನಲ್ಲಿ ಹಿರಿಯರಿದ್ದರೂ ಕಿರಿಯರಂತೆ ಚುರುಕುತನ, ಚಿಕ್ಕವರಿಂದ ದೊಡ್ಡವರ ವರೆಗೆ ಬೇಧ ಭಾವ ಇಲ್ಲದೆಎಲ್ಲರನ್ನೂ ಮಾತನಾಡಿಸುವ ಗುಣ, ಸಂಕಷ್ಟಕ್ಕೆ ಸಿಲುಕಿದವರ ಬಾಳಿಗೆ ಆಶಾಕಿರಣ, ಸಹಕಾರ ರಂಗಕ್ಕೆ ಹೇಳಿಮಾಡಿಸಿದ ವ್ಯಕ್ತಿತ್ವ ಇಷ್ಟು ಹೇಳಿದ ಮೇಲೆ ಎಲ್ಲರಿಗೂ ಗೊತ್ತಾಗಿರುವ ವ್ಯಕ್ತಿತ್ವ. ಅವರ ಪರಿಚಯ ಮಾಡಿಕೊಳ್ಳಲು ನಂಗೆ ತುಂಬಾ ಸಂತೋಷ ಅನಿಸುತ್ತದೆ.

ಡಿ ಟಿ ಪಾಟೀಲ ಕರಗಾಂವ ಅವರ ಪ್ರಾರಂಭಿಕ ಜೀವನ -
ದೇಶ ಒಂದು ಕಡೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟದ ಅಂತಿಮ ಹಂತದಲ್ಲಿರುವ ಸಂದರ್ಭದಲ್ಲಿ ಡಿ ಟಿ ಪಾಟೀಲರು  ಹುಟ್ಟಿದ್ದು 04-08-1936 ರಂದು  ಮಹಾರಾಷ್ಟ್ರದ ಹಲಸವಾಡಿ ಎಂಬಲ್ಲಿ ಜನಿಸುತ್ತಾರೆ. ತಂದೆ ತಮ್ಮನಗೌಡರು ಸ್ವಾತಂತ್ರ್ಯ  ಹೋರಾಟಗಾರು, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಕರಗಾಂವ, ಚಿಕ್ಕೋಡಿ ಭಾಗದಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿತ್ವ.  ಡಿ ಟಿ ಪಾಟೀಲರ ಪೂರ್ಣ ಹೆಸರು ದೇವೇಗೌಡ ತಮ್ಮನಗೌಡ ಪಾಟೀಲ. ಆದರೆ ಇವರು ಡಿ ಟಿ ಪಾಟೀಲ ಎಂದೇ ಪ್ರಸಿದ್ಧರು. ಡಿ ಟಿ ಪಾಟೀಲರೊಂದಿಗೆ ಕರಗಾಂವ ಗ್ರಾಮದ ಹೆಸರು ಜನಪ್ರಿಯ. ಇವರಿಗೆ ಡಿ ಟಿ ಪಾಟೀಲ ಕರಗಾಂವ ಎಂದೆ ಕರೆಯುತ್ತಾರೆ. ಗ್ರಾಮಸ್ಥರು ಮಹಾದೇವ ಗೌಡರೆಂದೂ ಕರೆಯುತ್ತಾರೆ. ಕೆಲವರು ಡಿ ಟಿ ಎಂದೆ ಕರೆಯುವರು. ಕರಗಾಂವ ಎಂಬ ಊರಿನ ಹೆಸರು ಕೇಳಿ ಬಂದರೆ ಎಲ್ಲರಿಗೂ ತಟ್ಟನೇ ನೆನಪಾಗುವುದು ಡಿ ಟಿ  ಪಾಟೀಲರು. ಇನ್ನೊಂದು ಹೆಸರು ಕರಗಾಂವ ಬೀರಪ್ಪ ದೇವರು. ಈ ಬೀರದೇವರ ದೇವಸ್ಥಾನ ಕೂಡಾ ಡಿ ಟಿ ಪಾಟೀಲರ ಸಲಹೆಯಂತೆ ಬೆಳವಣಿಗೆ ಕಾಣುತ್ತಿದೆ. ಚಿಕ್ಕೋಡಿ ಹುಕ್ಕೇರಿ ಭಾಗದಲ್ಲಿ ಕಾಕಾ ಎಂದೇ ಚಿರಪರಿಚಿತರಾಗಿದ್ದಾರೆ.

ಕೌಟುಂಬಿಕ ಜೀವನ -
ತಮ್ಮನಗೌಡರಿಗೆ ದೇವಗೌಡ ಪಾಟೀಲ ಮತ್ತು ಪರಗೌಡ ಪಾಟೀಲ ಎಂಬ ಗಂಡು ಮಕ್ಕಳು ಪರಗೌಡ ಪಾಟೀಲರು ಜಿಲ್ಲಾ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಿ ಟಿ ಪಾಟೀಲರಿಗೆ ಸಂಜೀವ ಗೌಡ ಪಾಟೀಲ ಮತ್ತು ರಾಜೀವ್ ಪಾಟೀಲ್ ಇಬ್ಬರೂ ಗಂಡು ಮಕ್ಕಳು. ರಾಜೀವ ಪಾಟೀಲರಿಗೆ  ರೀಶಬ್ ಪಾಟೀಲ ಮತ್ತು ನೀಲ್ ಪಾಟೀಲ ಪುತ್ರರಿದ್ದಾರೆ.

ಪ್ರಾರಂಬಿಕ ರಾಜಕೀಯ/ಸಾಮಾಜಿಕ ಜೀವನ -
 ಡಿ ಟಿ ಪಾಟೀಲರು ಚಿಕ್ಕ ವಯಸ್ಸಿನಲ್ಲೇ ನಾಯಕತ್ವದ ಗುಣ ಬೆಳೆಸಿಕೊಂಡು ಬೆಳೆದವರೂ. ಡಿ ಟಿ ಪಾಟೀಲರೂ ಬೆಳಗಾವಿ, ರಾಜ್ಯ ರಾಜಕೀಯ ನೇತಾರರು  ಎನಿಸಿಕೊಂಡಿರುವ ಅಪ್ಪಣ್ಣಗೌಡಾ ಪಾಟೀಲ, ಎಮ್ ಪಿ ಪಾಟೀಲ, ಬಸಗೌಡ ಪಾಟೀಲ ವಿಶ್ವನಾಥ್ ಕತ್ತಿ ಯವರ ಸಮಕಾಲಿನರು. ಗಾಂಧಿವಾದಿಗಳಾದ ಡಿ ಟಿ ಪಾಟೀಲರು ಹಳ್ಳಿಗಳ ವಿಕಾಸಕ್ಕೆ  ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ರಾಜಕೀಯ ಸೇರಿ ಸಹಕಾರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಹಕಾರ ಕ್ಷೇತ್ರದಲ್ಲಿ ಮಿಂಚಿದ್ದಾರೆ. ತಾನೂ ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಸಹಕಾರದ ತತ್ವ ಮೈಗೂಡಿಸಿಕೊಂಡು ಹಲವಾರು ಸಹಕಾರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಗ್ರಾಮೀಣ ನ್ಯಾಯವಾದಿ - ಕರಗಾಂವ ಗ್ರಾಮಕ್ಕೆ  ಬಡವರು, ರೈತಾಪಿ ಜನರು ತಮ್ಮ ಪ್ರಕರಣಗಳನ್ನು  ಕರಗಾಂವ ಗ್ರಾಮದ ಡಿ ಟಿ ಪಾಟೀಲರ ನಿವಾಸಕ್ಕೆ ಬಂದು ಸಮಸ್ಯೆಗಳನ್ನು  ಬಗೆಹರಿಸಿಕೊಳ್ಳುತ್ತಾರೆ. ಗೌಡರು ಯಾರಿಗೂ ಕೆಟ್ಟವರಾಗದೆ ಎಲ್ಲರಿಗೂ ಸಮಾಧಾನ ಹೇಳಿ ಸಮಸ್ಯೆ ಇತ್ಯರ್ಥ ಮಾಡುತ್ತಾರೆ. ಜನರು ಕೋರ್ಟ್ ಗಳಿಗೆ ಸುತ್ತಿ   ದುಡ್ಡು ಕರ್ಚು ಮಾಡುವ ಬದಲು ಈ ಗೌಡರ ನ್ಯಾಯಾಲಯಕ್ಕೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ. ಕೌಟುಂಬಿಕ ಜಗಳಗಳು, ಆಸ್ತಿ ತಕರಾರು, ಸೇರಿ ಹಲವಾರು ಸಮಸ್ಯೆಗಳನ್ನು ಇವರು ಇತ್ಯರ್ಥ ಮಾಡುತ್ತಾರೆ. ಈ ಭಾಗದ ಬಡ ಜನರು ಇಂದಿಗೂ ಕೋರ್ಟ್ ಮುಖ ನೋಡಿಲ್ಲ   ಏನೇ ಸಮಸ್ಯೆ ಬಂದರೂ ಜನರು ಬನ್ನಿ ಕಾಕಾರ ಮನೆಗೆ ಎನ್ನುವ ಮಾತು ಇಂದಿಗೂ ಪ್ರಸ್ತುತ.

ಸಮಾಜಮುಖಿ ಚಟುವಟಿಕೆ ಕರಗಾಂವ ಗ್ರಾಮ ಶಾಂತಿಗೆ ಹೆಸರುವಾಸಿಯಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತೆ ಎಲ್ಲ ಜನರೂ ಆತ್ಮಿಯತೆಯಿಂದ ವಾಸಿಸುತ್ತಾರೆ. ಎಲ್ಲ ಜಾತಿ ಜನಾಂಗದವರು ಕಾಕಾರ ಕುಟುಂಬಕ್ಕೆ ಹೋಗಿ ಸಹಾಯ, ಸೇವೆ ಪಡೆಯುತ್ತಾರೆ. ನಂಬಿದ ಜನರನ್ನು ಕಾಕಾ ರವರು ಎಂದು ಕೈ ಬಿಡುವುದಿಲ್ಲ.

ಆರ್ಥಿಕ ವಿಕಾಸದಲ್ಲಿ ಬಡವರ ಬಂದು - ಗ್ರಾಮ ವಿಕಾಸಕ್ಕಾಗಿ ಜನರಿಗೆ, ಕೃಷಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ, ಸೇರಿ ಹಲವಾರು ಕೃಷಿ ಚಟುವಟಿಕೆಗೆ  ಪ್ರೋತ್ಸಾಹಿಸಿದ್ದಾರೆ. ಕರಗಾಂವ ಗ್ರಾಮದಲ್ಲಿ ಕೃಷಿ ಸೇವಾ ಕೇಂದ್ರ ಸ್ಥಾಪಿಸಿ ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಸಾಮಗ್ರಿಗಳನ್ನು ಒದಗಿಸುವ ಮೂಲಕ ರೈತರ ಕಲ್ಯಾಣಕ್ಕೆ ಪ್ರೋತ್ಸಾಹಿಸುತ್ತಾರೆ. ಡಿ ಟಿ ಪಾಟೀಲರು ಚಿಕ್ಕೋಡಿ ಯಲ್ಲಿ ಡಿ ಟಿ ಪಾಟೀಲ ಕೋ ಆಫ್  ಬ್ಯಾಂಕ್ ನಿ ಎಂಬ ಬ್ಯಾಂಕನ್ನು ಸ್ಥಾಪಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸೇರಿ ಎಲ್ಲ ರೀತಿಯ ನೆರವು ನೀಡುತ್ತಾರೆ. ಈಗ ಇದರ ಶಾಖೆಗಳು ಯಾದಗೂಡ, ಬೆಳಗಾವಿ, ನಿಪ್ಪಾಣಿ ಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೊಟಭಾಗಿ ಏತ ನೀರಾವರಿ ಮೂಲಕ ಹುಕ್ಕೇರಿ ಮತ್ತು ಚಿಕ್ಕೋಡಿ ತಾಲ್ಲೂಕಿನ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ . ಚಿಕ್ಕೋಡಿ ಜಿಲ್ಲೆ, ಕರಗಾಂವ ಹಾಗೂ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗೆ ಹೋರಾಟ ಮಾಡಿ ಬೆಂಬಲಿಸುತ್ತಿದ್ದಾರೆ. ಸದ್ಯ ಡಿ ಟಿ ಪಾಟೀಲ ರವರು ಸದ್ಯ ಬೆಳಗಾವಿಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ಪಟ್ಟಣ ಬ್ಯಾಂಕುಗಳ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಹಕಾರ ಕ್ಷೇತ್ರದ ಬೆಳವಣಿಗೆ, ಬದಲಾವಣೆಗೆ ಹಲವಾರು ಶಿಫಾರಸು ಸಲ್ಲಿಸಿದ್ದಾರೆ. ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ
ಗ್ರಾಮದಲ್ಲಿ ಸಾರಿಗೆ ಸಂಪರ್ಕ, ಪ್ರಾಥಮಿಕ ಆರೋಗ್ಯ ಕೇಂದ್ರ, ಮೂಲಭೂತ ಸೌಕರ್ಯ, ಕುಡಿಯುವ ನೀರು  ಸೇರಿ ಹಲವಾರು ಕಾರ್ಯ ಚಟುವಟಿಕೆಗಳ ಮೂಲಕ ಮಾದರಿ ಗ್ರಾಮ ಪಂಚಾಯಿತಿ ಎನ್ನುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕೋಡಿಯ ಸಿ ಎಲ್ ಇ ಸಂಸ್ಥೆಯ ಸಂಸ್ಥಾಪಕ ಸದಸ್ಯರಾಗಿ, ಎಸ್ ಡಿ ವಿ ಎಸ್ ಸಂಘದ ಅಧ್ಯಕ್ಷರಾಗಿ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ, ನಿಡಸೋಸಿಯ ಎಸ್ ಜೆ ಪಿ ಎನ್ ಸಂಸ್ಥೆಯ ಸದಸ್ಯರಾಗಿ  ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ.ಇವರಿಗೆ ರಾಜ್ಯ ಸರ್ಕಾರದ ಸಹಕಾರ ರತ್ನ ಪ್ರಶಸ್ತಿ ಸೇರಿ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ.
       ಡಿ ಟಿ ಪಾಟೀಲರಿಗೆ 2013-14ರಲ್ಲಿ ವಿಜೃಂಭಣೆಯ ಅಮೃತಮಹೋತ್ಸವವನ್ನು ಅವರ ಅಪಾರ ಬೆಂಬಲಿಗರು ಆಚರಿಸಿದ್ದರು. ಈ ಕಾರ್ಯಕ್ರಮ ರಾಜ್ಯ ಮಟ್ಟದ ಹಲವಾರು ನಾಯಕರ ಸಮಾಗಮಕ್ಕೆ ವೇದಿಕೆಯಾಗಿತ್ತು. ಈಗ 83 ನೇ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿ 84ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಡಿ  ಟಿ ಪಾಟೀಲ ಕರಗಾಂವ ರಿಗೆ  ಆ ದೇವರು ಹೆಚ್ಚಿನ ಸೇವೆ ನೀಡುವ ಮಟ್ಟದಲ್ಲಿ ಅವಕಾಶ ಒದಗಿಸಲಿ ಹಾಗೂ ಆರೋಗ್ಯ ಚನ್ನಾಗಿರಲಿ ಎನ್ನುವುದೇ ನನ್ನ ಮತ್ತು ಎಲ್ಲರ ಆಶಯ.
                                             
      
 ಭೈರಪ್ಪ ಹಾಲಪ್ಪಗೋಳ ಕರಗಾಂವ
 ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು ಚಿನ್ನದ ಪದಕ ವಿಜೇತರು,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ 

Tuesday, 19 March 2019

ಸಮಾಜ ಕಾರ್ಯ ದಿನಾಚರಣೆ 2019/world social work day 2019

       

ವಿಶ್ವ ಸಮಾಜ ಕಾರ್ಯ ದಿನಾಚರಣೆ-2019
ವಿಶ್ವ ಸಮಾಜ ಕಾರ್ಯ ದಿನಾಚರಣೆಯನ್ನು ವಿಶ್ವದಾದ್ಯಂತ ವೃತ್ತಿಪರ ಸಮಾಜಕಾರ್ಯಕರ್ತರು, ಸಮಾಜ ಕಾರ್ಯ ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು ಸಂಭ್ರಮದಿಂದ ಆಚರಿಸುತ್ತವೆ. ವಿಶ್ವ ಸಮಾಜ ಕಾರ್ಯ ದಿನಾಚರಣೆ ಯನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಮಂಗಳವಾರದಂದು ಆಚರಿಸಲಾಗುತ್ತದೆ. 2019 ನೇ ಸಾಲಿನ ವಿಶ್ವ ಸಮಾಜ ಕಾರ್ಯ ದಿನಾಚರಣೆಯ ಧ್ಯೇಯ ವಾಕ್ಯ" Promoting The Importance of Human relationships" . ಹೀಗೆ ಪ್ರತಿ ವರ್ಷ ಒಂದೊಂದು ಧ್ಯೇಯವನ್ನು ಇಟ್ಟುಕೊಂಡು ವಿಶ್ವ ಸಮಾಜ ಕಾರ್ಯ ದಿನಾಚರಣೆ ಯನ್ನು ಆಚರಿಸುತ್ತಾ ಬರಲಾಗುತ್ತಿದೆ.
  The International Federation of social workers (IFSW), ಅಂತರರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳು, ವಿವಿಧ ಸಮಾಜ ಕಾರ್ಯ ಸಂಘಟನೆಗಳು, ವೃತ್ತಿಪರ ಸಮಾಜಕಾರ್ಯಕರ್ತರ ಸಹಕಾರ ಮೂಲಕ ಮೊದಲ ಬಾರಿಗೆ 1983 ರಲ್ಲಿ ವಿಶ್ವ ಸಮಾಜ ಕಾರ್ಯ ದಿನಾಚರಣೆ ಯನ್ನು ಆಚರಿಸಲು ಪ್ರಾರಂಬಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಸಮಾಜಕಾರ್ಯಕರ್ತರು ಸಮಾಜ ಕಾರ್ಯ ಕ್ಷೇತ್ರದಲ್ಲಿ ಆದ ಬೆಳವಣಿಗೆ ತಿಳಿಸಲು, ಸಮಾಜ ಕಾರ್ಯ ದಲ್ಲಿ ಬದಲಾವಣೆ ತರಲು ವಿಶ್ವ ಸಮಾಜ ಕಾರ್ಯ ದಿನಾಚರಣೆ ಯನ್ನು ಆಚರಿಸಲಾಗುತ್ತಿದೆ.
   2018 ಹಾಗೂ 2017 ರಲ್ಲಿ Promoting community and Environmental sustainability, 2016  ಹಾಗೂ 2015 ರಲ್ಲಿ promoting the dignity and worth of people's  ಎಂಬ ವಿಷಯದ ಮೇಲೆ ವಿಶ್ವ ಸಮಾಜ ಕಾರ್ಯ ದಿನಾಚರಣೆಯನ್ನು ಆಚರಿಸಲಾಗಿತ್ತು. ಇಂದು ಭಾರತ ಸೇರಿ ವಿಶ್ವದಾದ್ಯಂತ ವಿಶ್ವ ಸಮಾಜ ಕಾರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

ಭೈರಪ್ಪ ಹಾಲಪ್ಪಗೋಳ, ಚಿಕ್ಕೋಡಿ
ಬಿ ಎಸ್ ಡಬ್ಯೂ, ಎಮ್ ಎಸ್ ಡಬ್ಲ್ಯು
 ಚಿನ್ನದ ಪದಕ ವಿಜೇತರು,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

Saturday, 2 March 2019

Chikkodi Ranker and gold medalist

Chikkodi taluka karagaon village Bairappa Halappagol secure first rank and gold medal in bachelor of social work and Master of social work in Rani Channamma University belagavi 

ಸಂಕೇಶ್ವರದ ಚಿನ್ನದ ಹುಡುಗ ಭೈರಪ್ಪ ಗೆ ಸನ್ಮಾನ

ಸಂಕೇಶ್ವರದ ಎಸ್ ಡಿ ವಿ ಎಸ್  ಸಂಘದ ಬಿ ಎಸ್ ಡಬ್ಲ್ಯು ಕಾಲೇಜಿನ ವಿದ್ಯಾರ್ಥಿ ಭೈರಪ್ಪ  ಲಕ್ಷ್ಮಣ ಹಾಲಪ್ಪಗೋಳ(ಕರಗಾಂವ)   ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಬಿ ಎಸ್ ಡಬ್ಲ್ಯು ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ನೊಂದಿಗೆ ಚಿನ್ನದ ಪದಕ  ಪಡೆದದ್ದಕ್ಕೆ ಎಸ್ ಡಿ ವಿ ಎಸ್ ಸಂಘದ ಅಧ್ಯಕ್ಷರಾದ ಶ್ರೀ ಎ ಬಿ ಪಾಟೀಲರವರು ಸನ್ಮಾನಿಸಿದರು 

SDVS'S college Sankeswar topper

SDVS'S Bsw college sankeswar topper Bairappa Halappagol secure first rank and gold medal in bachelor of social work in 2016 convocation Rani Channamma University Belagavi 

Sunday, 17 February 2019

ಭಯೋತ್ಪಾದನೆಯ ಅಳಿವು ಮಾನವೀಯತೆಯ ಉಳಿವು . ಕವನ-ಭೈರಪ್ಪ ಹಾಲಪ್ಪಗೋಳ

 ಭಯೋತ್ಪಾದನೆಯ ಅಳಿವು
                       ಮಾನವೀಯತೆಯ ಉಳಿವು

ಭರತಖಂಡದಲ್ಲಿ  ಅಂದು ಶಾಂತಿಯುತ ಬಾಳ್ವೆಯ ಜೀವನ
ಆದರೆ ಇಂದು ಏನಿದ್ದರೂ ಬರಿ ಭಯದ ವಾತಾವರಣ
ಶಾಂತಿದೂತರ ನಾಡಿನಲ್ಲಿ ಭಯೋತ್ಪಾದನೆಯ ನರ್ತನ
ಭಾರತಾಂಬೆ ಕರುಣಿಸು ನಿನ್ನ ಮಕ್ಕಳಿಗೆ ಸಮೃದ್ಧ ಜನಜೀವನ


ವೈವಿಧ್ಯತೆಯಲ್ಲಿ ಏಕತೆಯ  ಹೆಮ್ಮೆಯ ಭರತ ಭೂಮಿ ನಮ್ಮದು
ವಿಶ್ವ ಧರ್ಮ ಧರ್ಮಗಳ ಮದ್ಯೆ ಮಾನವ ಧರ್ಮ  ಮರೆಯದಿರಲಿ ಎಂದೆಂದೂ
ಬರಿ ದ್ವೇಷ, ಅಹಂಕಾರ, ಹಿಂಸೆ, ತಾರತಮ್ಯ  ಶೋಷಣೆಯಲ್ಲಿ
ಜೀವನ ಸಾಗಲಿ ಮಾನವೀಯ ಮೌಲ್ಯಗಳ ನೆಲೆಯಲ್ಲಿ


ವಿಶ್ವಜನಸಂಕುಲಕ್ಕೆ  ವಿಶ್ವ ಭಾವೈಕ್ಯತೆ  ಭಾವ ಒದಗಲಿ ಬಹುಬೇಗ
ಶಾಂತಿ ಸಹಬಾಳ್ವೆಯೊಂದಿಗೆ ಮಾನವೀಯತೆ ಬರಲಿ ಜಗದಾಗ
ವಿಶ್ವದಾದ್ಯಂತ ಮರುಕಳಿಸದಿರಲಿ ಆವಂತಿಪೋರದ ಆಹುತಿ
ಪ್ರಪಂಚದಲ್ಲೆ ಮುಕ್ತವಾಗಲಿ ಭಯೋತ್ಪಾದನೆಯ ಭಯ ಬೀತಿ


ಚಿನ್ನದಂತಹ ಮನಸ್ಸಿಗೆ ಮುದ್ದಿನಂತ ಜೀವಗಳಿಗೆ ತಟ್ಟದಿರಲಿ  ಭಯ
ನಮ್ಮ್ಮೆಲ್ಲರಿಗೆ ಕೊಡು ದೇವರೆ ವೈರಿಗಳನ್ನ ಎದುರಿಸುವ ಅಭಯ
ಪ್ರೀತಿಯಿಂದ ಗೆಲ್ಲಲಿ ಜನರ ಮನ, ಶಾಂತಿಯೇ ಆಗಲಿ  ಜನಾಂದೋಲನ
ನಮ್ಮಲ್ಲಿ ಬಹುಬೇಗನೆ ಆಗಲಿ ಭಯೋತ್ಪಾದನೆ ನಿರ್ಮೂಲನ



ಕೊಡು ತಾಯಿ ಭಾರತಾಂಬೆಯ ಹೆಮ್ಮೆಯ ಪುತ್ರರಿಗೆ ಶೌರ್ಯದ ಚಲ
ಬಹುಬೇಗ ಬರಲಿ ಭೂತಾಯಿಯ ಮಕ್ಕಳಿಗೆ ಪ್ರೀತಿ ಶಾಂತಿ ಮಾನವೀಯ ಬಲ
ಪೂರ್ವ ಪಶ್ಚಿಮ ದಕ್ಷಿಣೋತ್ತರ ಭಾರತೀಯ ಮಕ್ಕಳಲ್ಲಿ ಬರಲಿ ಒಗ್ಗಟ್ಟು
ಗಡಿನಾಡೆ ಇರಲಿ ಕರುನಾಡೆ ಇರಲಿ ಬರಲಿ ಎಲ್ಲರಲ್ಲಿ  ದೇಶ ಪ್ರೇಮದ ನಂಟು
                   

                   ರಚನೆ - ಭೈರಪ್ಪ ಹಾಲಪ್ಪಗೋಳ 

Saturday, 9 February 2019

ಸಮಾಜ ಕಾರ್ಯ ಬೆಳವಣಿಗೆಗೆ ಸಮಗ್ರ ಸಲಹೆಗಳು - ಭೈರಪ್ಪ ಹಾಲಪ್ಪಗೋಳ .Integrated suggestions to Integrated Development of Social Work by Bairappa Halappagol

ಸಮಾಜ ಕಾರ್ಯ ಬೆಳವಣಿಗೆಗೆ ಸಮಗ್ರ ಸಲಹೆಗಳು -   
ರಚನೆ - ಭೈರಪ್ಪ ಹಾಲಪ್ಪಗೋಳ.  ಚಿಕ್ಕೋಡಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
ಪೀಠಿಕೆ
ಸಮಾಜ ಕಾರ್ಯವು ಇತ್ತಿಚಿನ ಒಂದು ಜ್ಞಾನದ ಶಾಖೆಯಾಗಿದ್ದು , ಮೊದಮೊದಲು ಸಾಂಪ್ರದಾಯಿಕ ಸ್ವರೂಪದಲ್ಲಿ ಇದ್ದ ಸಮಾಜ ಕಾರ್ಯವು  ಜಗತ್ತಿನಲ್ಲಿ ಉದ್ಭವಿಸುವ ಗಂಡಾಂತರ ಸನ್ನಿವೇಶ ನಿವಾರಣೆಗೆ ಕ್ರಮೇಣ ಸಂಘಟಿತಗೊಂಡು ವೃತ್ತಿಪರತೆಯ ಸ್ವರೂಪ ಹೊಂದುತ್ತಿದೆ. ಒಂದು ವೃತ್ತಿಯಾಗಿ ಇರಬೇಕಾದ ಎಲ್ಲಾ ಅರ್ಹತೆ ಹೋಂದಿದ್ದು . 1936 ರಲ್ಲಿ ವೃತ್ತಿಪರತೆಯ ಸ್ವರೂಪ ಪಡೆದುಕೂಂಡು ಕ್ರಮೇಣ ಶ್ರೀಮಂತಿಕೆ ಹೆಚ್ಚಿಸಿಕೂಂಡು ಜನಪ್ರಿಯ ಆಗುವಷ್ಟರಲ್ಲಿಯೆ ಸಾಮಾಜಿಕ ಸಮಸ್ಯೆಗಳ ನಿವಾರಕ ಸಮಾಜ ಕಾರ್ಯಕ್ಕೆ ಈಗ ಅಸ್ತಿತ್ವದ ಪ್ರಶ್ನೆ ಉದ್ಭವಿಸುತ್ತಿದೆ.
      ಮಾನವೀಯ ಮೌಲ್ಯಗಳ ನೆಲೆಯಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಾ ಬಂದಿದ್ದ ಸಮಾಜ ಕಾರ್ಯವು 2016/17 ರವರಿಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದು ನಂತರ ಕ್ರಮೇಣ  ಅಸ್ತಿತ್ವಕ್ಕೆ ಧಕ್ಕೆ ಉಂಟು ಎಂಬಂತೆ ಕಂಡು ಬಂದಿದೆ. ಹೀಗಾಗಿ ಸಮಾಜ ಕಾರ್ಯ ಬೆಳವಣಿಗೆ ಎಲ್ಲ ಸಮಾಜ ಕಾರ್ಯ ವಿದ್ಯಾರ್ಥಿಗಳು, ವೃತ್ತಿಪರರ, ಉಪನ್ಯಾಸಕರ ಕೂಗು ಸರ್ಕಾರದ ವರೆಗೆ ಯಾವಾಗ ಮುಟ್ಟುವುದೋ ಆಗ ಸಮಾಜ ಕಾರ್ಯ ಶಿಕ್ಷಣದ ಅವಧಿಯನ್ನು ಸುವರ್ಣ ಕಾಲ ಎನ್ನಲು ಸಾಧ್ಯ.
     ಸಮಾಜ ಕಾರ್ಯ ಬೆಳವಣಿಗೆ ಕುರಿತು ನನಗೆ ತಿಳಿದ ಹಾಗೆ ಕೆಲವು ಸಮಗ್ರ ಸಲಹೆಗಳನ್ನು ನೀಡಲು ಇಚ್ಛಿಸುತ್ತೇನೆ. ಇವುಗಳ ಅನುಷ್ಠಾನಕ್ಕೆ  ಸ್ವಾರ್ಥ ಭಾವನೆ ಮರೆತು ಎಲ್ಲರೂ ಶ್ರಮಿಸಬೇಕು. ಆಗ ಸಮಾಜ ಕಾರ್ಯದ ಶ್ರೀಮಂತಿಕೆ ಕಾಣಲು ಸಾಧ್ಯ. ಈ ವಿಷಯಗಳನ್ನು ನನಗೆ ತಿಳಿದ ಮಟ್ಟಿಗೆ ಪ್ರಕಟಿಸಿದ್ದೆನೆ. ಏನಾದರೂ ತಪ್ಪು ಇದ್ದರೆ    ಕ್ಷಮಿಸಿ.  ಸಮಾಜ ಕಾರ್ಯ ಬೆಳವಣಿಗೆಗೆ ಸಮಗ್ರ ಸಲಹೆಗಳು ಈ ಕೆಳಕಂಡಂತಿವೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
*ಸಲಹೆಗಳು
1)ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಮಾಜ ವಿಜ್ಞಾನ ಪಠ್ಯದಲ್ಲಿ  ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ಪಾಠಗಳಂತೆ ಸಮಾಜಕಾರ್ಯದ ಪಠ್ಯಗಳನ್ನು ಸೇರಿಸಿ ವಿದ್ಯಾರ್ಥಿಗಳಿಗೆ ಸಮಾಜ ಕಾರ್ಯ ವಿಷಯದ ಪರಿಚಯ ಮಾಡಿಕೊಡಬೇಕು. ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣದಲ್ಲಿ   ಕ್ಷೇತ್ರ ಕಾರ್ಯ ಅಳವಡಿಸಬೇಕು.
2)ಕನಿಷ್ಠ 1-2 ಪಾಠಗಳನ್ನು ಅಳವಡಿಸಬೇಕು. 01-05ನೇ ತರಗತಿವರಿಗೆ ಮಾನವೀಯ ಮೌಲ್ಯಗಳನ್ನು ಬೋದಿಸುವುದು. ಹಾಗೂ 06 ರಿಂದ 10 ತರಗತಿವರಿಗೆ ಸಮಾಜ ಕಾರ್ಯ ಪರಿಕಲ್ಪನೆ, ಪರಿಚಯ ಹಾಗೂ ವಿಶೇಷಿಕರಣಕ್ಕೆ ಸಂಬಂಧಿಸಿದ ಪಠ್ಯ ಗಳನ್ನು ಸೇರಿಸುವುದು.
3)ಈ ಪಠ್ಯಗಳನ್ನು ಬೋದಿಸಲು ಸಮಾಜ ಕಾರ್ಯ ಶಿಕ್ಷಕರನ್ನು ನೇಮಿಸಿಕೂಳ್ಳಬೇಕು. ಹಾಗೂ ಈ ಶಿಕ್ಷಕರು ಶಾಲಾ ಸಮಾಜ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಬೇಕು.
4)ಸಮಾಜ ಕಾರ್ಯ ಶಿಕ್ಷಕರು ಸಮಾಜ ಕಾರ್ಯ ಪಠ್ಯ ಬೋದಿಸುವುದಲ್ಲದೆ. ಹೆಚ್ಚಾಗಿ ಸಮಾಜ ಕಾರ್ಯಕರ್ತನ ಪಾತ್ರಗಳನ್ನು ನಿರ್ವಹಿಸಬೇಕು.
5) 01-07 ಒಬ್ಬರು, 08-10 ರವರಿಗೆ  ಒಬ್ಬರ ಸಮಾಜ ಕಾರ್ಯಕರ್ತರ ನೇಮಕವಾಗಬೇಕು ಹಾಗೂ ಸಮಾಜ ಕಾರ್ಯಕರ್ತನ ಪಾತ್ರಗಳ ಮಹತ್ವದ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪಿಸಬೇಕು.
ಶಾಲಾ ಸಮಾಜ ಕಾರ್ಯಕರ್ತನ /ಸಮಾಜ ಕಾರ್ಯ ಶಿಕ್ಷಕರ ಮಹತ್ವ
1)ವಿದ್ಯಾರ್ಥಿಗಳಲ್ಲಿ ಮಾನಸಿಕ ಬೆಂಬಲ ಒದಗಿಸಲು ಸಹಾಯಕ
2)ವಿದ್ಯಾರ್ಥಿಗಳಿಗೆ ವಯಕ್ತಿಕ ಕಾಳಜಿ ವಹಿಸಿ ಶಾಲೆ ಬಗ್ಗೆ ಉತ್ತಮ ಭಾವನೆ  ಬರುವಂತೆ ಮಾಡಲು ಅವಕಾಶ.
3)ವಿದ್ಯಾರ್ಥಿಗಳ ಗೈರು ಹಾಜರಾತಿ ಕಡಿಮೆ ಮಾಡಬಹುದು
4)ವಿದ್ಯಾರ್ಥಿ, ಶಿಕ್ಷಕರು, ಪಾಲಕರಲ್ಲಿ ಹೊಂದಾಣಿಕೆ ಮೂಡಿಸಿ ಆರೋಗ್ಯಕರ ಶಾಲಾ ವಾತಾವರಣ ನಿರ್ಮಿಸಬಹುದು.
5)ಸಮುದಾಯದತ್ತ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಕಲಿಕಾ ಆಸಕ್ತಿ ಹೆಚ್ಚಿಸಬಹುದು.
6)ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ, ನೈತಿಕ ಶಿಕ್ಷಣ,  ಒದಗಿಸಿ ಬಾಲಾಪರಾಧ ತಪ್ಪಿಸಬಹುದು
7)ಒತ್ತಡ ನಿವಾರಣೆಗೆ, ಪರೀಕ್ಷಾ ಭಯ ಹೋಗಲಾಡಿಸಲು ಆಪ್ತ ಸಮಾಲೋಚನೆ, ಸಾಂತ್ವನ ಒದಗಿಸಿ ಮಕ್ಕಳಿಗೆ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿಸಬಹುದು.
8)ಕಾರ್ಯಕ್ರಮ ಆಯೋಜನೆ ಸರಳವಾಗುತ್ತದೆ
9) ವಿದ್ಯಾರ್ಥಿಗಳ ವಯಕ್ತಿಕ ಕಾಳಜಿ ವಹಿಸಿ ಸಮಸ್ಯೆ ಗುರುತಿಸಿ ಪರಿಹಾರಕ್ಕೆ ಒತ್ತುಕೊಡಲು ಸಹಾಯಕ
10) ಇತ್ಯಾದಿ

ಜವಾಬ್ದಾರಿ
*  ಪಠ್ಯ ಅನುಷ್ಠಾನ ವಿಷಯದ  ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು,  ಪಠ್ಯ ಪುಸ್ತಕ ಪರಿಶೀಲನೆ ಸಮಿತಿಯವರೊಂದಿಗೆ ಸಮಾಜಕಾರ್ಯ ಮಹಾವಿದ್ಯಾಲಯ, ವಿಭಾಗಗಳ ಮುಖ್ಯಸ್ಥರು, ಪ್ರಾಚಾರ್ಯರು  ಚರ್ಚಿಸಬೇಕು.
*ಶಾಲಾ ಸಮಾಜ ಕಾರ್ಯಕರ್ತರ ನೇಮಕಕ್ಕೆ ಸಂಬಂಧಿಸಿದಂತೆ ಶಾಲಾ ಕ್ಷೇತ್ರದಲ್ಲಿ ಸಮಾಜ ಕಾರ್ಯಕರ್ತನ ಮಹತ್ವದ ಕುರಿತು ಸಂಶೋಧನೆ ನಡೆಸಿ  ವರದಿಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವಾಲಕ್ಕೆ ಸಲ್ಲಿಸುವುದು.
*ಇದರ ಕುರಿತು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರು , ಪದವೀಧರ, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರೂಂದಿಗೆ ವಿದ್ಯಾರ್ಥಿಗಳು, ಮುಖ್ಯಸ್ಥರು ಚರ್ಚಿಸಬೇಕು.
ಅರ್ಹತೆ -
01-07-  ಬಿ ಎಸ್ ಡಬ್ಲ್ಯು , 08-10 - ಎಂ ಎಸ್ ಡಬ್ಲ್ಯು.




ಪಿಯುಸಿ ಶಿಕ್ಷಣ
*ಪಿಯುಸಿ ಕಲಾ ವಿಭಾಗದ ಪಠ್ಯದಲ್ಲಿ ಸಮಾಜ ಕಾರ್ಯ ವಿಷಯವನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳಲು ಅವಕಾಶ ನೀಡಬೇಕು.
* ಸಮಾಜ ಕಾರ್ಯ ವಿಷಯವನ್ನು ಪ್ರಥಮ ಪಿಯುಸಿ ಯಲ್ಲಿ ಸಮಾಜ ಕಾರ್ಯ ಪರಿಕಲ್ಪನೆ, ಬೇಸಿಕ್ ವಿಷಯದ ಬಗ್ಗೆ ಪಠ್ಯ ರೂಪಿಸಬೇಕು. ದ್ವಿತೀಯ ಪಿಯುಸಿಯಲ್ಲಿ ಕಾರ್ಯ ವ್ಯಾಪ್ತಿ, ವಿಶೇಷಿಕರಣಕ್ಕೆ ಸಂಬಂಧಿಸಿದ ಪಠ್ಯ ರೂಪಿಸಬೇಕು.
*ಪಿಯುಸಿ ವಿದ್ಯಾರ್ಥಿಗಳಿಗೆ ಕ್ಷೇತ್ರ ಬೇಟಿ ಹಮ್ಮಿಕೊಂಡು, ಅದರ ಅನುಭವ, ಜ್ಞಾನವನ್ನು ಒದಗಿಸಬೇಕು.
*ಕಲಾ ವಿಭಾಗದಲ್ಲಿ ಆಂತರಿಕ ಅಂಕಗಳಿಗೆ ಅವಕಾಶವಿಲ್ಲ ಹೀಗಾಗಿ  80 ಅಂಕಗಳ ಪ್ರಶ್ನೆ ನೇರ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು, 20 ಅಂಕಗಳನ್ನು ಅನ್ವಯಿಕ ಆಧಾರಿತ ಪ್ರಶ್ನೆಗಳಿಗೆ ಅವಕಾಶ ಕಲ್ಪಿಸಿಕೂಡುವುದು. ಉದಾ-ಕ್ಷೇತ್ರ ಕಾರ್ಯ ವರದಿ, ಸಂಭಾಷಣೆ
*ಇದಕ್ಕೆ  ಎಮ್ ಎಸ್ ಡಬ್ಲ್ಯು, ಬಿ ಎಡ್ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಬೇಕು.
* ಈ ಸಮಾಜ ಕಾರ್ಯ ಶಿಕ್ಷಕರು  ತಮ್ಮ ಕಾಲೇಜುಗಳಲ್ಲಿ ವಿದ್ಯಾರ್ಥಿ ಮಾರ್ಗದರ್ಶನ ಕೇಂದ್ರ  ಸ್ಥಾಪಿಸಿ ಆಪ್ತ ಸಮಾಲೋಚನೆ ಒದಗಿಸಬೇಕು.

ಅನುಕೂಲ -
-ವಿದ್ಯಾರ್ಥಿಗಳು ಸಮಾಜ ಕಾರ್ಯ ವಿಷಯ ಆಯ್ದುಕೊಂಡರೆ  ಬಿ ಎಸ್ ಡಬ್ಲ್ಯು ಪದವಿ ಪ್ರವೇಶಕ್ಕೆ ಅನುಕೂಲ ಆಗುತ್ತದೆ.
-ಸಮಾಜ ಕಾರ್ಯಕರ್ತರಿಗೆ ಉದ್ಯೋಗಾವಕಾಶ ಹೆಚ್ಚುತ್ತವೆ.
ಜವಾಬ್ದಾರಿ -
-ಪಿ ಯು ಮಂಡಳಿಯೊಂದಿಗೆ ಬಿ ಎಸ್ ಡಬ್ಲ್ಯು,  ಎಮ್ ಎಸ್ ಡಬ್ಲ್ಯು ವಿಭಾಗದ ಮುಖ್ಯಸ್ಥರು, ಪ್ರಾಚಾರ್ಯರು ಇದರ ಅನುಷ್ಠಾನಕ್ಕೆ ಚರ್ಚಿಸಬೇಕು.
-ಶಾಲಾ, ಕಾಲೇಜುಗಳ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಜೊತೆ ಚರ್ಚಿಸಬೇಕು.

ಪದವಿ ಶಿಕ್ಷಣ
*ಕೆಲವು ಜನರು ಸಮಾಜ ಕಾರ್ಯ ವಿಷಯವನ್ನು ಪದವಿ ಮಟ್ಟದಲ್ಲಿ  ಕಲಾ ಪದವಿ (ಬಿ ಎ )ದಲ್ಲಿ  ಒಂದು ಐಚ್ಛಿಕ ವಿಷಯವಾಗಿ ಅಳವಡಿಸಬೆಕೆಂದು ಹೇಳುತ್ತಿದ್ದಾರೆ. ಆದರೆ ಅದು ಉತ್ತಮ ಬೆಳವಣಿಗೆಯಲ್ಲ. ಏಕೆಂದರೆ  ಒಂದು ಕಾಲೇಜಿಗೆ ಒಬ್ಬರೆ ಉಪನ್ಯಾಸಕರು ಬೋದಿಸಬೇಕಾಗುತ್ತದೆ. ಅದೇ ಬಿ ಎಸ್ ಡಬ್ಲ್ಯು ಕೋರ್ಸ್ ನಲ್ಲಿ 05- 06 ಜನ  ಬೋದಿಸಲು ಅವಕಾಶ ಸಿಗುತ್ತದೆ.
*ಬಿ ಎ ಕೋರ್ಸ್ ಆದರೆ ಸಮಾಜಕಾರ್ಯಕ್ಕೆ ವೃತ್ತಿಪರ ಕೋರ್ಸಿನ ಮಾನ್ಯತೆ ದೊರೆಯುವುದಿಲ್ಲ. ಅದೆ ಬಿ ಎಸ್ ಡಬ್ಲ್ಯು ಕೋರ್ಸ್ ಆದರೆ ವೃತ್ತಿಪರ ಕೋರ್ಸನ ಮಾನ್ಯತೆ ಸಿಗುತ್ತದೆ.
 *ಬಿ ಎ ಕೋರ್ಸ್ ನಲ್ಲಿ ಸಮಾಜ ಕಾರ್ಯದ ಬಗ್ಗೆ ಪರಿಪೂರ್ಣ ಅಧ್ಯಯನ ಆಗುವುದಿಲ್ಲ. ಅದೆ ಬಿ ಎಸ್ ಡಬ್ಲ್ಯು ಕೋರ್ಸ್ ನಲ್ಲಿ ಪರಿಪೂರ್ಣ, ಆಳವಾದ ಅಧ್ಯಯನಕ್ಕೆ ಅವಕಾಶ ಸಿಗುತ್ತದೆ. ಮತ್ತು ಕ್ಷೇತ್ರ ಕಾರ್ಯದ ಬಗ್ಗೆ ಹೆಚ್ಚಿನ ಅನುಭವ ದೊರೆಯುತ್ತದೆ.
*ವೃತ್ತಿಪರತೆಯ ಮಾನ್ಯತೆ ಹೊಂದಿ ಬಿ ಎಸ್ ಡಬ್ಲ್ಯು ಕೋರ್ಸ್ ನಡೆಸುವುದು ಉತ್ತಮ. ಬಿ ಎ ದಲ್ಲಿ ಕೇವಲ ಒಂದು ವಿಷಯವಾಗಿ ಬೋದಿಸುವುದು ನಕಾರಾತ್ಮಕ ಪರಿಣಾಮ ಆಗುತ್ತದೆ.
 -ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಬಿ ಎಸ್ ಡಬ್ಲ್ಯು ಪಠ್ಯ ಹಾಗೂ ಫಲಿತಾಂಶ ದಲ್ಲಿ ಸಮಪ್ರಮಾನತೆ ಕಾಯ್ದುಕೂಳ್ಳಬೇಕು.
-ಸರ್ಕಾರಿ ಪಠ್ಯಪುಸ್ತಕ ರಚಿಸಬೇಕು.
*ತಾಲೂಕಿಗೆ ಒಂದಾದರೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ ಎಸ್ ಡಬ್ಲ್ಯು ಪದವಿ ಸ್ಥಾಪಿಸಬೇಕು.
*ಈಗಾಗಲೇ  ಬಿ ಎಸ್ ಡಬ್ಲ್ಯು ಕೋರ್ಸ್ ಹೊಂದಿರುವ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳು ಆಪ್ತಸಮಾಲೋಚನೆಗಾಗಿ ವಿದ್ಯಾರ್ಥಿ ಮಾರ್ಗದರ್ಶನ ಕೇಂದ್ರ ಪ್ರಾರಂಬಿಸುವುದು.
ಜವಾಬ್ದಾರಿ
- ಬಿ ಎಸ್ ಡಬ್ಲ್ಯು ಕಾಲೇಜಿನ ಪ್ರಾಚಾರ್ಯರು, ಮುಖ್ಯಸ್ಥರು, ವೃತ್ತಿಪರ ಸಂಘಟನೆಗಳ ಮುಖಂಡರು ಉನ್ನತ ಶಿಕ್ಷಣ ಸಚಿವರು, ಪದವೀಧರ, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರೂಂದಿಗೆ ಚರ್ಚಿಸಬೇಕು.


ಸ್ನಾತಕೋತ್ತರ ಶಿಕ್ಷಣ
*ರಾಜ್ಯದ ಎಲ್ಲ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಕೋರ್ಸ್ ಅಳವಡಿಸುವುದು.
*ಬಿ ಎಸ್ ಡಬ್ಲ್ಯು ಪದವಿ ವ್ಯಾಸಂಗ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಎಂ ಎಸ್ ಡಬ್ಲ್ಯು ಕೋರ್ಸ್ ನಲ್ಲಿ ಪ್ರವೇಶ ದೊರೆಯಬೇಕು ಅಥವಾ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.
*ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಬೋದಿಸುವ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, ಸ್ವಾಯತ್ತ, ಖಾಸಗಿ, ಡಿಮ್ಡ್ ವಿಶ್ವವಿದ್ಯಾಲಯಗಳು ಪಠ್ಯಕ್ರಮ, ಫಲಿತಾಂಶದಲ್ಲಿ ಏಕರೂಪತೆ ತರಬೇಕು.
*ಕಾರ್ಯಾಗಾರ, ವಿಚಾರಗೋಷ್ಠಿಗಳು ಕಡ್ಡಾಯವಾಗಿ  ಜರುಗಬೇಕು.
*ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನೆ, ಲೇಖನಗಳನ್ನು ಜರ್ನಲ್ ನಲ್ಲಿ ಪ್ರಕಟಿಸುವ ಕುರಿತು ಮಾಹಿತಿ ಒದಗಿಸಬೇಕು.
*ನೆಟ್ /ಸೆಟ್ /ಪಿ ಹೆಚ್ ಡಿ  ಕುರಿತು ಮಾಹಿತಿ ಒದಗಿಸಬೇಕು
ಇತ್ಯಾದಿ
 ಸ್ನಾತಕೋತ್ತರ ಡಿಪ್ಲೊಮಾ /ಪಿ ಹೆಚ್ ಡಿ
*ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಭೋದಿಸುತ್ತಿರುವ ರಾಜ್ಯದ ಎಲ್ಲ ಸಾಮಾನ್ಯ ವಿಶ್ವವಿದ್ಯಾಲಯಗಳು ಪಿ ಜಿ ಕೋರ್ಸ್ನೋಂದಿಗೆ. Human resource management, Rural Development, project management, counselling  ನಂತಹ ಪಿ ಜಿ ಡಿಪ್ಲೊಮಾ ಕೋರ್ಸ್ನ ನ್ನು ಜಾರಿಗೆ ತರಬೇಕು.
*ಹಲವಾರು ಜನ ಪಿ ಹೆಚ್ ಡಿ ಆಕಾಂಕ್ಷಿಗಳಿದ್ದು ಅದಕ್ಕೆ ಪ್ರತಿವರ್ಷ ಪಿ ಹೆಚ್ ಡಿ ನೋಂದಣಿ ಮಾಡಿಕೊಳ್ಳಬೇಕು.


ಸಮಾಜ ಕಾರ್ಯ ವೃತ್ತಿಪರ ಸಂಘಟನೆಗಳು

*ರಾಜ್ಯ ಮಟ್ಟದ ಸಮಾಜ ಕಾರ್ಯಕರ್ತರ ಸಂಘಟನೆಯನ್ನು ರಚಿಸಿ ರಾಜ್ಯದ ಎಲ್ಲ ಸ್ನಾತಕ, ಸ್ನಾತಕೋತ್ತರ  ವಿದ್ಯಾರ್ಥಿಗಳನ್ನು ನೊಂದಣಿ ಮಾಡಿಸಿ ಮೂದಲು ಸಮಾಜ ಕಾರ್ಯಕರ್ತರಲ್ಲಿಯೆ ಒಗ್ಗಟ್ಟಿನ್ನು ಮೂಡಿಸಬೇಕು.
*ಹಾಗೇ ಎಲ್ಲ ವಿಶ್ವವಿದ್ಯಾಲಯಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಕೂಡಾ ಸಂಘಟನೆಗಳನ್ನು ಜಾರಿಗೆ ತರಬೇಕು.
*ಪ್ರತಿ ವರ್ಷ ವರ್ಷಕ್ಕೆ ಒಂದು ಜಿಲ್ಲಾ ಕೇಂದ್ರ ಆಯ್ದುಕೊಂಡು ಸಮಾಜ ಕಾರ್ಯ ಸಮ್ಮೇಳನ ಹಮ್ಮಿಕೊಳ್ಳಬೇಕು.  ಈ ಸಮ್ಮೇಳನದಲ್ಲಿ ಶಿಕ್ಷಕರ ಕ್ಷೇತ್ರದ, ಪದವಿದರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು, ಗ್ರಾಮೀಣಾಭಿವೃದ್ಧಿ, ಕಾರ್ಮಿಕ, ಆರೋಗ್ಯ ಸಚಿವರು, ಉನ್ನತ ಶಿಕ್ಷಣ ಸಚಿವರನ್ನು ಅತಿಥಿಗಳಾಗಿ ಕರೆಯಿಸಿ ಸಮಾಜಕಾರ್ಯದ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡುವುದು.

ವೃತ್ತಿಪರ ಸಮಾಜ ಕಾರ್ಯ ಸಂಘಟನೆಗಳ ಕರ್ತವ್ಯಗಳು
*ನೆಟ್, ಸೆಟ್ ಪರೀಕ್ಷೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುವುದು.
*ವ್ಯಕ್ತಿತ್ವ ವಿಕಸನ ತರಬೇತಿ
* ಅಂತರರಾಷ್ಟ್ರೀಯ, ರಾಷ್ಟ್ರೀಯ ಜರ್ನಲ್ ನಲ್ಲಿ ಲೇಖನ, ಸಂಶೋಧನೆ ಯನ್ನು ಪ್ರಕಟಿಸುವ ಕುರಿತು ತರಬೇತಿ.
*ಸಂದರ್ಶನ ಎದುರಿಸುವ ತರಬೇತಿ
*project proposal ತಯಾರಿಸುವ ಕುರಿತು ತರಬೇತಿ ನೀಡುವುದು.
*ಸದಸ್ಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯ ಆಗಬೇಕು.



ಸರ್ಕಾರಿ ಉದ್ಯೋಗಗಳು
*ಉನ್ನತ ಶಿಕ್ಷಣ ಸಚಿವರು, ಪದವೀಧರ, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರೂಂದಿಗೆ ಚರ್ಚಿಸಿ ಶಿಕ್ಷಣ ಕ್ಷೇತ್ರದಲ್ಲಿ ಶಾಲಾ ಸಮಾಜ ಕಾರ್ಯಕರ್ತರನ್ನು ನೇಮಿಸುವಂತೆ ಒತ್ತಾಯಿಸುವುದು.
*ಗ್ರಾಮೀಣಾಭಿವೃದ್ಧಿ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಬಿ ಎಸ್ ಡಬ್ಲ್ಯು ಪದವಿದರರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಹಾಗೂ ಎಂ ಎಸ್ ಡಬ್ಲ್ಯು ಪೂರ್ಣಗೊಳಿಸಿದವರಿಗೆ ಗ್ರಾಮೀಣಾಭಿವೃದ್ಧಿ ಅಧಿಕಾರಿ ಹುದ್ದೆ ಸೃಜಿಸಲು ಹೇಳುವುದು.
*ಸಿ ಡಿ ಪಿ ಓ ದಂತೆ  ಹಾಸ್ಟೆಲ್ ವಾರ್ಡನ್, ತಾಲ್ಲೂಕಾ ಸಮಾಜ ಕಲ್ಯಾಣ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ  ಹುದ್ದೆಗಳಿಗೆ ಕನಿಷ್ಟ 50% ರಷ್ಟು ಮೀಸಲಾತಿ ಒದಗಿಸಬೇಕು.
*ಕೈಗಾರಿಕೆ, ಆರೋಗ್ಯ, ಅಪರಾಧ ಕ್ಷೇತ್ರದಲ್ಲಿ ಕಡ್ಡಾಯವಾಗಿ ಸಮಾಜ ಕಾರ್ಯಕರ್ತರಿಗೆ ಉದ್ಯೋಗ ಭದ್ರತೆ ನೀಡಬೇಕು.
*ಕೆ ಎ ಎಸ್ /ಆಯ್ ಎ ಎಸ್  ನಲ್ಲಿ ಸಮಾಜ ಕಾರ್ಯ ವಿಷಯವನ್ನು ಐಚ್ಛಿಕ ವಿಷಯವಾಗಿ ಸೇರಿಸಲು ಶ್ರಮಿಸಬೇಕು.
ಮೇಲ್ಕಾಣಿಸಿದ ವಿಷಯಗಳ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳು
1)ಸಹಿ ಸಂಗ್ರಹ
2)ಸರ್ಕಾರ, ಮಂತ್ರಿಗಳೂಂದಿಗೆ ಚರ್ಚೆ
3)ಮನವಿ ಸಲ್ಲಿಕೆ
4)ಪತ್ರ ಚಳವಳಿ
5)ಅಂಕಿ ಅಂಶಗಳ ಸಂಗ್ರಹ
6)ಸಮಾಜ ಕಾರ್ಯದ ಪ್ರಾಮುಖ್ಯತೆ ತಿಳಿಸುವುದು.
7)ಸಮಾಜ ಕಾರ್ಯದ ಕಾರ್ಯಾಗಾರಗಳಿಗೆ ಉನ್ನತ ಶಿಕ್ಷಣ ಸಚಿವರನ್ನು ಕರೆಯಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದು.
8)ಸಂಶೋಧನೆ ಹಮ್ಮಿಕೊಂಡು ಸಮಾಜ ಕಾರ್ಯದ ಪ್ರಾಮುಖ್ಯತೆ ಕಂಡು ಹಿಡಿದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.
ಇತ್ಯಾದಿ


ಧನ್ಯವಾದಗಳು
Bairappa Halappagol  .Gold medalist in BSW and MSW .Rani channamma university Belagavi
Karagaon tq-Chikkodi
Dist -Belagavi

Wednesday, 6 February 2019

karagaon ಕರಗಾಂವದ ವಿದ್ಯಾರ್ಥಿ ಭೈರಪ್ಪ ಹಾಲಪ್ಪಗೋಳ ಇವರಿಗೆ ಡಬಲ್ ಗೋಲ್ಡ್ ಮೆಡೆಲ್


ಚಿಕ್ಕೋಡಿ ತಾಲ್ಲೂಕಿನ ಕರಗಾಂವ ಗ್ರಾಮದ ಭೈರಪ್ಪ ಹಾಲಪ್ಪಗೋಳ ರವರು ಬೆಳಗಾವಿ ಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು ಎರಡು ವಿಭಾಗಗಳಲ್ಲಿ ಚಿನ್ನದ   ಪದಕ ಪಡೆದು ಗ್ರಾಮಕ್ಕೆ ಮಾದರಿಯಾಗಿದ್ದಾರೆ

Tuesday, 5 February 2019

karagaon awerness programs about swaccha bharat by Bairappa Halappagol and school students




Bairappa Halappagol and school students organised swaccha bharat campaign in Karagaon village chikkodi taluka belagavi district 

DR Ashok D'Souza sir wishing to RCUB Social work Department MSW topper Bairappa Halappagol

Dr Ashok D'Souza, sir wishing  to 2016-17 Batch Msw topper Bairappa Halappagol in 2018 6th convocation time 

Sankranti hadu by Bairappa Halappagol ಸಂಕ್ರಾಂತಿ ಸಡಗರ ಸುಗ್ಗಿ ಸಂಭ್ರಮ (ಸಂಕ್ರಾಂತಿ ಹಾಡು) ಭೈರಪ್ಪ ಹಾಲಪ್ಪಗೋಳ

 ಸಂಕ್ರಾಂತಿ ಸಡಗರ  ಸುಗ್ಗಿ ಸಂಭ್ರಮ
ಸಂಕ್ರಾಂತಿ ಹಬ್ಬಕ್ಕ ಹೇಳ್ತೀನಿ ಕೇಳ್ರವ್ವ ನಮ್ಮೂರ ಸುಗ್ಗಿ ಸಂಭ್ರಮನಾ
ಕುಣಿಯುತ್ತ ನಲಿಯುತ್ತ ಸಿಹಿಯನ್ನು ಹಂಚುತ್ತಾ ಹೇಳ್ತೀನಿ ಕೇಳು  ನಮ್ಮಣ್ಣಾ ll

ಭೂತಾಯಿಯ ಕೃಪೆ ಯಿಂದ ನಮ್ಮ ಊರೆಲ್ಲಾ ಸಿರಿಧಾನ್ಯ
ಮನೆಮನೆಗೂ ಬಂದೈತೆ ಸುಗ್ಗಿಯ ಸಡಗರ ಸಂಭ್ರಮ ಅನನ್ಯ

ಮಳೆ ಬರಲಿ ಬರ ಬರಲಿ  ಸುಖ ಬರಲಿ ದುಖ ಬರಲಿ
ಹಿರಿಯರು ನಂಬಿದ ಕೃಷಿ ಕೆಲಸ  ಎಂದೆಂದೂ ನಾವು ಬಿಡೊದಿಲ್ಲ

ಎಂಥೆಂಥ  ಸಾಲಿ ಬರಲಿ ಎಂಥೆಂಥ ಕೆಟ್ಟ ಬರ  ಬರಲಿ
ಕೋಟಿ ವಿಧ್ಯಗಿಂಥ ಮೇಟಿ  ವಿದ್ಯೆ ಮೇಲಂತ ಜಂಬದಿಂದ ನಾ ಹೇಳ್ತೀನಿ

ರಾಮ ಲಕ್ಷ್ಮಣ ಎತ್ತು  ಗೌರಿ ಗಂಗೆ ಹಸು ದೇವರಂತೆ ಸಿಗುವಾಗ
ಮತ್ತ್ಯಾರು ಬೇಕ ನನ್ನ  ಸಾಟಿ  ಮತ್ತೇನ ಬೇಕ ಸರ್ಕಾರ

ನಮ್ಮೂರ ನಮಗ ಪಾಡ ನಮ್ಮ ಕೃಷಿನ ನಮಗ ಪಾಡ
ಶಹರ, ಪಟ್ಟಣದ ಹಾದಿ ಹಿಡಿದರ ಮೆಚ್ಚನೂ ನಮ್ಮ ಬಸವಣ್ಣ

ಮಲ್ಲಪ್ಪನ ಜಾತ್ರೆಗೆ ಸಿಂಗಾರ ಮಾಡಿಕೊಂಡು ಜೋಡೆತ್ತಿನ ಬಂಡಿ ಹೂಡ್ತೀನಿ
ಹೊಸ ಬಟ್ಟೆ ಹಾಕೊಂಡ ಹಾಡುತ್ತಾ ನಲಿಯುತ್ತ ರೈತ ಸಾಹುಕಾರನಂಗ ಮೆರಿತಿನಿ

ಮಲ್ಲಪ್ಪನ ಜಾತ್ರೆಗೆ ಹೋಗುಣು ಬಾರಕ್ಕ ಬುತ್ತಿಯ  ತಗೊಂದು ತವರಿಗೆ
 ಬಸವಣ್ಣ ರಿಗೆ  ಗಂಟೆ  ಹಣೆಪಟ್ಟಿ ಯ ತಗೊಂಡು  ಬರೋಣ ನಗನಗುತ ಊರಿಗೆ


ಮನೆಯಲ್ಲಿ ಶೇಂಗಾ ಹೋಳಿಗೆ ಮಾಡಿಕೊಂಡು ಊರಿನ ದೇವರಿಗೆ ನೈವೇದ್ಯ ಕೂಟ್ಟು
ಅಕ್ಕನ ಮಕ್ಕಳಿಗೆ,  ಮನೆಮಂದಿಗೆಲ್ಲ ಜಾತ್ರೆಯ ಉಡುಗೊರೆ ಕೂಡುವೆನು

ಬಿಳಿಜೋಳ ಕಟಕ್ ರೂಟ್ಟಿ  ಮೊಸರು ಶೇಂಗಾ ಚಟ್ನಿ ತಿನ್ನುವ ಹೊತ್ನಾಗ
ಬರಗಾಲದ  ಕಷ್ಟ ಮರೆತು ಎಳ್ಳು ಬೆಲ್ಲ ತಿಂದು ಸಂಕ್ರಾಂತಿ ಹಬ್ಬ ಮಾಡೇನ

ಯಾವದೇ  ಸರ್ಕಾರ ಬರಲಿ ಯಾವದೇ ದೂರೆ ಆಳಲಿ ನಮ್ಮ ಸಾಮ್ರಾಜ್ಯದಾಗ
ರಾಮ ಲಕ್ಷ್ಮಣ ಗಂಗೆ ಗೌರಿ ನೇ ನನ್ನ ದೂರೆಗಳು  ನನ್ನ ಹೊಲವೇ ನನ್ನ ಸಾಮ್ರಾಜ್ಯ ಅಂತಿನಿ ಆಗಾಗ

ಇಡಿ ಜಗತ್ತು ಅನ್ನ  ಬೇಡುವಾಗ ಹಸಿಯದಂಗ ಆಹಾರ ಬೆಳೆದು ಕೂಡ್ತೀನಿ
ಹೀಗೆ ನಗು ನಗುತಾ ಸಂಕ್ರಾಂತಿ ಹಬ್ಬನ ಕಷ್ಟದಾಗೂ ಸಡಗರದಿಂದ ಮಾಡ್ತಿನಿ

ಕೃಷಿ ಕೆಲಸದಾಗ ನನ್ನ ಮಗ ಭಾರಿ ಅಂಥ ಮೇಲಮೇಲೆ ಸಾಧಿಸಿ ತೋರಿಸ್ತಿನಿ
ಅಪ್ಪ ಅಮ್ಮಗ ಮುದ್ದಿನ ಮಗನಾಗಿ ಭೂತಾಯಿಗೆ ಮಣ್ಣಿನ ಮಗನಾಗಿ  ಸದಾ ಇರ್ತಿನಿ

 ಸಂಕ್ರಾಂತಿ ಹಬ್ಬಕ್ಕ ಹೇಳ್ತೀನಿ ಕೇಳ್ರವ್ವ ನಮ್ಮೂರ ಸುಗ್ಗಿ ಸಂಭ್ರಮನಾ
ಕುಣಿಯುತ್ತ ನಲಿಯುತ್ತ ಸಿಹಿಯನ್ನು ಹಂಚುತ್ತಾ ಹೇಳ್ತೀನಿ ಕೇಳು  ನಮ್ಮಣ್ಣಾll

                               ರಚನೆ - ಭೈರಪ್ಪ ಹೆಚ್ ಕೆ

karagaon village Bairappa secure first rank and gold medal in Rani Channamma University Belagavi

Karagaon student Bairappa Halappagol & and his parents with villagers wishes to sixth convocation of Rani Channamma University belagavi 

Monday, 4 February 2019

karagaon topper and gold medalist Bairappa Halappagol

Karagaon student Bairappa Halappagol  got double gold medal and 1st rank in BSW And MSW.  department of social work  Rani Channamma University belagavi. 

Karagaon village Bairappa Halappagol secure first rank and gold medal in Rani Channamma University belagavi


karagaon village Bairappa Halappagol secure first rank and gold medal in bachelor of social work aan master of social work in Rani Channamma University belagavi .2016 and 2018  convocation 

Rcub topper Bairappa Halappagol

Rani Channamma University belagavi topper Bairappa Halappagol secure first rank and gold medal in bachelor of social work 2015


Rani Chennamma University topper Bairappa Halappagol

Rani Channamma University belagavi topper bairappa Halappagol got second time gold medal in master of social work (MSW ) at Rani Channamma University belagavi 6th convocation  2018. He is already one time secure one gold medal with first rank in BSW from Rani Channamma University belagavi 4th convocation 2016.


Sunday, 27 January 2019

Rcub gold medalist Bairappa Halappagol poem written about bhavya bharatha

Rcub gold medalist Bairappa Halappagol poem written about bhavya bharatha  Republic day
                      ಭವ್ಯ ಭಾರತ -  
ಭರತಖಂಡ, ಭರತಭೂಮಿ, ಹಿಂದೂಸ್ತಾನ ನಾಮ ಹಲವು ನಿನ್ನದು
ಭಾರತಾಂಬೆ ನೀನು ಇಂಡಿಯಾ, ಭಾರತ ಎಂದೆ ಇರುವೆ ಪ್ರಖ್ಯಾತವು...

ಸಿಂಧು ಬಯಲಿನ ನಾಗರಿಕತೆಯಿಂದ ನಿನ್ನ  ಗೌರವ ಎಲ್ಲೆಡೆ
  ವೇದ , ಮಹಾಕಾವ್ಯ ದಿಂದ  ಭಾರತದ ಶ್ರೇಷ್ಠತೆ ಹೆಚ್ಚಿತು ವಿಶ್ವದೆಲ್ಲೆಡೆ...

ಗಂಗಾ ಯಮುನಾ ಗೋದಾವರಿ ಕಾವೇರಿಗಳಾದವು ಭಾರತದ ಜೀವನದಿ
ನರ್ಮದಾ ಕೃಷ್ಣ ತುಂಗಾ ಸಿಂದು ಬ್ರಹ್ಮಪುತ್ರರು ಆದರು ಭಾರತದ ಪವಿತ್ರ ನದಿ...

ಜೈನ  ಭೌದ್ದ ಧರ್ಮದಿಂದ ಮೊಳಗಿತು ಎಲ್ಲೆಡೆ ವಿಶ್ವ ಶಾಂತಿ , ಸಹೋದರತೆ
ಮಹಾವೀರ ಗೌತಮ ಬುದ್ದರು ವಿಶ್ವಕ್ಕೆ ಆದರು ಆದರ್ಶ ಪ್ರಾಯತೆ....

ಮೌರ್ಯ ಗುಪ್ತ ವಿಜಯನಗರ ಅರಸರು ಕೂಟ್ಟರು ವಿಶ್ವ ಮಾನ್ಯತೆ
ಗಂಗ ಕದಂಬ ಚಾಲುಕ್ಯ ಪಲ್ಲವ ರಾಷ್ಟ್ರಕೂಟರು ಕೂಟ್ಟರು ಅದ್ಭುತ ಕಲೆ ಸಂಸ್ಕೃತಿ.....

ಕಾಳಿದಾಸ, ಆರ್ಯಭಟ ರನ್ನ ಪೊನ್ನರಿಂದ ರಚಿತವಾದವು ಸಾಹಿತ್ಯ ವಿಜ್ಞಾನವು
ಅಲಹಾಬಾದ ಮಸ್ಕಿ  ಹಲ್ಮಿಡಿ ಬಾದಾಮಿಯಲ್ಲಿ ರಚಿತವಾದವು ಭವ್ಯ ಶಿಲಾ ಶಾಸನಗಳು....

ಘಜ್ನಿ, ಘೊರಿ, ಮಂಗೊಲಿಯನ್ನರುಸೇರಿ ಹಲವರು ಬಂದರು ದಂಡೆತ್ತಿ
ಖಿಲ್ಜಿ, ತುಘಲಕ್  ಬಾಬರ್ ಮುನ್ನುಗ್ಗಿ ನುಸುಳಿದರು ಹಿಂದೂಸ್ತಾನಕ್ಕೆ ತಲೆಯೆತ್ತಿ.....

ಬಸವ ಶಂಕರ ಮದ್ವ ರಮನುಜರು ಕೂಟ್ಟರು ಸಮಾಜಕ್ಕೆ ಸುಧಾರಣೆಯನ್ನು
ರಮಾನಂದ ಕಬೀರ್ ಚೈತನ್ಯ ನಾನಕ್ ದಾಸರೂ ಕೂಟ್ಟರು ಸಮಾಜಕ್ಕೆ ಕೀರ್ತನೆಯನ್ನು...

ಆಡಳಿತ ಆಸೆಗೆ ಮನಸೋತು ನುಗ್ಗಿದರೂ ತಾ ಮುಂದು ನಾ ಮುಂದೆಂದು
ಪೋರ್ಚುಗೀಸ್ಸ ಬ್ರಿಟಿಷ ಪ್ರೇಂಚ ಡಚ್ಚರು ಕಚ್ಚಾಡಿದರು ತಮ್ಮಲ್ಲೇ ಮೊದಮೊದಲು....

ಪ್ಲಾಸಿ ಬಕ್ಸಾರ ಕದನಗಳು ಭಾರತೀಯರಿಗೆ ಕೂಟ್ಟಿತು ಬಹು ದೊಡ್ಡ ಸೋಲು
ಬ್ರಿಟಿಷರ ಸಾಮ್ರಾಜ್ಯ ದ ಶೋಷಣೆಗೆ ಒಳಗಾಯಿತು ಭರತಖಂಡ ಬಹುಪಾಲು.....

ದೇಶಿಯ ಅರಸರನ್ನು ಮುಗಿಸಲು ನಡೆದವು ಒಳಗೊಳಗೆ ಕುತಂತ್ರ ರಣನೀತಿಗಳು
ಒಂದೊಮ್ಮೆ ಪಾಲಾದವು ಮೈಸೂರು ಮರಾಠಾ ಸೇರಿ ದೇಶಿ ರಾಜಸಂಸ್ಥಾನಗಳು.....

ಬಂಡೆದ್ದರೂ ಕಿತ್ತೂರು ಚೆನ್ನಮ್ಮ, ಲಕ್ಷ್ಮಿಭಾಯಿ  ರಾಯಣ್ಣ ಹಲಗಲಿ ಬಂಟರು ಸೇರಿ ಹಲವರು
ಮಂದ, ಕ್ರಾಂತಿಕಾರಿ, ಗಾಂಧಿವಾದಿಗಳೂ  ಸೇರಿ ಹೋರಾಡಿದರು ಸ್ವಾತಂತ್ರ್ಯದವರೆಗೂ....

ಮೋಹನರಾಯ್, ಸರಸ್ವತಿ, ಪಾಂಡುರಂಗ ವಿವೇಕಾನಂದರು ತಮ್ಮನ್ನು ಮುಡಿಪಿಟ್ಟರು ಸಮಾಜೊದ್ದಾರಕ್ಕೆ
ಅಂತು ಇಂತು ಕೊನೆಗೆ ಬಂದಿತು  ಹೆಮ್ಮೆಯ ಭಾರತ ದೇಶವು  1947-ಅಗಸ್ಟ 15 ರಂದು ಸ್ವಾತಂತ್ರ್ಯಕ್ಕೆ....

ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಸಿಖ್ಖ ಭೌದ್ದ  ಸೇರಿ ಇರವೆವು ನಾವಿಲ್ಲಿ ಐಕ್ಯತೆ ಹೊಂದಿ
ಹಿಂದಿ ಕನ್ನಡ ತಮಿಳು ತೆಲುಗು ಸಂಸ್ಕೃತ ಮರಾಠಿ ಹೀಗೆ  ಇರುವೆವು ವೈವಿಧ್ಯತೆಯಲ್ಲಿ ಏಕತೆ ಹೊಂದಿ..

ಭಾರತೀಯ ಜನರ ಸ್ವತಂತ್ರ ಹೋರಾಟಕ್ಕೆ ಸಿಪಾಯಿ ದಂಗೆ ಎಂದರು ಬಿಳಿ ಮಂಗಗಳು
ಭಾರತಾಂಬೆಯ ಮಕ್ಕಳ ಕೆಚ್ಚದೆಯ ಹೋರಾಟ ತ್ಯಾಗ ಬಲಿದಾನಕ್ಕೆ  ಒಲಿಯಿತು  ಗಣರಾಜ್ಯ ನಾಡು...

ಭಾರತರತ್ನ, ಜ್ಞಾನಪೀಠ ಒಲಂಪಿಕ್  ಆಟ ಪಾಠ ಸೇರಿ ಉಕ್ಕಿತು ಭಾರತದ ಶ್ರೀಮಂತಿಕೆ
ನನ್ನನ್ನು  ಭಾರತಾಂಬೆಯ ಮಡಿಲಲ್ಲಿ ಹುಟ್ಟುವಂತೆ ಮಾಡಿತು ನನ್ನ ಪುಣ್ಯವಂತಿಕೆ....

                                  
ರಚನೆ - ಭೈರಪ್ಪ ಹಾಲಪ್ಪಗೋಳ

Saturday, 12 January 2019

Rcub gold medalist Bairappa Halappagol securing gold medal in bachelor of social work

Bhairappa Halappagol got gold medal in bachelor of social work from Rani Channamma University belagavi

Rcub gold medalist Bairappa Halappagol with family members photo

rani Channamma University belagavi social work gold medalist Bairappa Halappagol and his family members photo. this time bhairappa and his family members very happy moment

youth inspiration song by rcub gold medalist Bairappa Halappagol

rcub  double gold medal student Bairappa Halappagol write one poem about youth inspiration for swami vivekanand jayanti celebration as a youth day

Thursday, 10 January 2019

Rani Channamma University Belagavi msw gold medalist Bairappa Halappagol

Rani Channamma University belagavi department of social work. gold medalist Bairappa Halappagol and his parents photo

Rani Channamma University, post graduate Dept of social work 2016-17 batch toppers.Bairappa Halappagol, Shilpa Desai and Arati Nashipudi

Rani Channamma University toppers in Msw (master of social work) in 2016-17.  first ranker and double gold medalist Bairappa Halappagol, 2nd ranker shilpa Desai and third ranker Arati nashipudi.  bairappa halappagol second time baged gold medal and 1st rank in Rani Channamma University belagavi. he is already gold medalist in Bsw.